ಏಯ್ ಏಳೋ ..ಊರ್ ಬಂತು... ಬೆಳಿಗ್ಗೆ ಬೆಳಿಗ್ಗೆ ಯಾರಿದು...?ಈ ತರ ತೊಂದ್ರೆ ಕೊಡ್ತಾ ಇದ್ದಾರಲ್ಲ..ಅಂತ ಎದ್ದು ಕುಳಿತೆ.ಆಗ ಜ್ಞಾನೋದಯವಾಯಿತು.ಓಹ್ ಬಸ್ನಲ್ಲಿದ್ದೇನೆ.ಪಕ್ಕದಲ್ಲಿ ಪುರಿ ನನ್ನನ್ನು ಎಬ್ಬಿಸ್ತಾ ಇದ್ದಾನೆ. ಅಯ್ಯೋ ಇಷ್ಟು ಬೇಗ ಊರು ಬಂದ್ಬಿಡ್ತಾ ಅಂತ ಎದ್ದು ಶೂ ಹಾಕ್ಕೊಂಡೆ.ನನಗೆ ಈ ಸ್ಲೀಪರ್ ಬಸ್ ಅಂದ್ರೆ ಅಷ್ಟೆ.ಹತ್ತಿದ ಕೂಡಲೇ ನಿದ್ದೆ.ಇಳಿಯೋ ಜಾಗ ಬಂದರೂ ಎಚ್ಚರ ಆಗಲ್ಲ.ಹೀಗಾಗಿ ನಾನು ಒಬ್ಬೊಬ್ಬನೇ ದೂರ ಪ್ರಯಾಣ ಮಾಡುವುದೇ ಇಲ್ಲ.ಈಗ ಜೊತೆಗೆ ಪುರಿ ಇದ್ದಾನಲ್ಲ.ಹೆದರಿಕೆಯಿಲ್ಲ.ಹೀಗಾಗಿ ನಿದ್ದೆ ಜೋರಾಗೇ ಬಂದಿತ್ತು.ಬಸ್ಸಿಂದ ಇಳ್ದಾಗಲೇ ಗೊತ್ತಾಗಿದ್ದು.ನಾವ್ ಬೆಂಗಳೂರಿನಿಂದ ಹನ್ನೆರಡು ತಾಸುಗಳ ಸುದೀರ್ಘ ಪ್ರಯಾಣ ಮಾಡಿದ್ದು ನೀಲಿ ಬಣ್ಣದ ಬಸ್ಸಿನಲ್ಲಿ ಅಂತ. 'ನೀಲಿ ನನ್ನ ನೆಚ್ಚಿನ ಬಣ್ಣ..ವಿಶಾಲತೆಯ ಸಂಕೇತ..'ಅಂತ ಆಗಾಗ ತತ್ತ್ವಜ್ಞಾನಿಯಂತೆ ಮಾತನಾಡುತ್ತಿರುತ್ತೇನೆ.ಹೀಗಾಗಿ ಚೆನ್ನಾಗಿ ನಿದ್ದೆ ಮಾಡಲು ಅವಕಾಶ ಕೊಟ್ಟ ಆ ನೀಲಿ ಬಸ್ಸಿನ ಬಗ್ಗೆ ಏನೋ ಅಭಿಮಾನ.
ರೈಟ್..... ಬಸ್ ಹೊರಟಿತು. ಸುತ್ತಲಿನ ನೀಲಿ ಬಣ್ಣ ಮಾಯವಾಗಿ ಹಸಿರಾಯಿತು. ಏಯ್ ಈ ಕಡೆ ಬಾರೋ.. ಪುರಿ ಬ್ಯಾಗ್ ಹಿಡಿದು ಮುಂದಕ್ಕೆ ಹೊರಟ.ನಾನು ಹಿಂಬಾಲಿಸಿದೆ.ಪುರಿಯ ಚಪ್ಪಲಿ ಬಸ್ ಹತ್ತುವಾಗ ಬಾಗಿಲಿಗೆ ಸಿಕ್ಕಿ ಹರಿದಿತ್ತು.ಅದು ದಾರಿಯಂತಿರಲಿಲ್ಲ.ವರ್ಷಕ್ಕೆ ಒಮ್ಮೆ ಜನ ಓಡಾಡುವ ದಾರಿಯಿರಬೇಕು ಅಂದುಕೊಂಡೆ.ಪುರಿ ಹರಿದ ಚಪ್ಪಲಿಯ ಕಾರಣದಿಂದ ನಿಧಾನವಾಗಿ ಕಾಲೆಳೆಯುತ್ತಿದ್ದ ಪುರಿ ಕಾಲಿಗೆ ಸಿಕ್ಕ ಒಣ ಎಲೆಗಳನ್ನು ಬದಿಗೆ ಸರಿಸುತ್ತಾ ದಾರಿ ಮಾಡುತ್ತಿದ್ದ.
ಮರಗಳು ಈ ಚಳಿಗಾಲದಲ್ಲಿ ಎಲೆ ಉದುರಿಸಿ ಉದುರಿಸಿ ದಾರಿ ಮುಚ್ಚಿಬಿಡುತ್ತವೆ.. ಅವನಂದ.
ನಾನೂ ಓದಿದ್ದೆ..ಚಳಿಗಾಲದಲ್ಲಿಎಲೆ ಉದುರಿಸುವ ಮರಗಳು..ಈಗ ಕಂಡಂತಾಯಿತು..ಅಲ್ವೋ ಇದೇ ಎನೋ ನಿಮ್ಮೂರಿನ ರೆಡ್ ಕಾರ್ಪೆಟ್ ಸ್ವಾಗತ..
ಯಾಕೋ ..ಬ್ಯಾಗ್ ಭಾರವಾಗಿದೆಯಾ..ಹಿಡ್ಕೊಳ್ಲಾ?...
ಪಾಪ ಅವನದೇ ಅವನಿಗೆ ಭಾರವಾಗಿದೆ.ನನ್ನದೇಕೆ ಅವನಿಗೆ ಕೊಡಲಿ..? ಮೊದಲೇ ಚಪ್ಪಲಿ ಹರಿದಿದೆ.ಇನ್ನು ಈ ದಾರಿ ನೋಡಿದರೆ ವನವಾಸದಲ್ಲಿ ರಾಮ ಅನುಭವಿಸಿದ ಕಷ್ಟಗಳಲ್ಲಿ ಇದೂ ಒಂದಿರಬಹುದು ಅನಿಸುತ್ತಿದೆ.ಬೆಂಗಳೂರಿನಲ್ಲಿ ಬೆಳೆದು ಬದುಕಿದ ನನಗೆ ಈ ರೀತಿ ನಡೆದು ಅಭ್ಯಾಸವಿಲ್ಲ ನಿಜ. ಆದರೆ ಆಸಕ್ತಿ ಇದೆಯಲ್ಲಾ..ಅದಕ್ಕೆ ತಾನೇ ಪುರಿ ಕರೆದ ತಕ್ಷಣ ರಜ ಕಳೆಯಲು ಇಲ್ಲಿಗೆ ಬಂದಿದ್ದು. ಹೀಗಾಗಿ ಅವನಿಗೇ ಪುನಃ ಭಾರ ಹೊರಿಸುವುದು ಸರಿಯಲ್ಲಇಂದೆನಿಸಿ ಸುಮ್ಮನಾದೆ. ಬ್ಯಾಗ್ ಹೊತ್ತು ನಾನೂ ಕಾಲೆಳೆಯತೊಡಗಿದೆ.
ಅಯ್ಯುಮ್ಮಾ..ಸುಸ್ತೋ ಸುಸ್ತು ಬಾಯಿ ಹೇಳದಿದ್ದರೂ ಮುಖ ಹೇಳುತ್ತಿತ್ತು.ಪ್ರತಿ ಹೆಜ್ಜೆಗೂ ಬ್ಯಾಗ್ ಭಾರವಾಗುತ್ತಿದೆಯೋ ಹೇಗೆ ಎಂಬ ಅನುಮಾನವೂ ಬಂತು.ಪುರಿ ಮೊದಲೇ ಹೇಳಿದ್ದ.ಸುತ್ತಲೂ ಹಸಿರು.ಗಿಡಮರಗಳ ತಂಪಿನಲ್ಲಿ ನಡೆದುಕೊಂಡು ಹೋಗಬೇಕು.ಬೆಳಿಗ್ಗೆಗೂ ಮಧ್ಯಾಹ್ನಕ್ಕೂ ಭೇದವಿಲ್ಲದೇ ನೆರಳು ನೀಡುವ ಮರಗಳು....ಪೊದೆಗಳ ನಡುವೆ ಕುಳಿತು ಕಿರುಚುವ ಕಾಡಿನ ಕೀಟವರ್ಗ....ಹಕ್ಕಿಗಳ ಚಿಲಿಪಿಲಿಗೆ ಸ್ಪರ್ಧಿಸುವ ನೀರಿನ ಜುಳುಜುಳು...ಇನ್ನೂ ಎನೇನೋ.. ಅವೆಲ್ಲಾ ಇದೆ ನಿಜ..ಆದರೆ ಹಾಳಾದ ಈ ಬ್ಯಾಗ್ ಇರಬಾರದಿತ್ತು.ಹದಿನೈದು ದಿನಗಳ ಮಟ್ಟಿಗೆ ಪುರಿಯ ಮನೆಗೆ ಹೋಗುತ್ತೇನೆ ಎಂದಾಗ ಅಮ್ಮ ನಾಲ್ಕು ಜೀನ್ಸ್,ಆರು ಶರ್ಟ್ ಹಾಕಿ ಬ್ಯಾಗ್ ಕೊಟ್ಟಿದ್ದಳು.ನಾನು ಜೊತೆಗೆ ಎರಡೆರಡು ಶೂ ,ಸ್ವೆಟರ್,ನನ್ನ ವಿಡಿಯೋ ಗೇಮ್ ಸೇರಿಸಿ ಇದೇನೂ ಭಾರವಿಲ್ಲ ಅಂದುಕೊಂಡು ಬಸ್ ಏರಿದ್ದೆ...
ಇದೇ ನೋಡೋ..ನಾಗರ ಕಲ್ಲು..ಹೆಸರಿಗೆ ತಕ್ಕಂತೆ ಕಲ್ಲಿನಲ್ಲಿ ನಾಗರ ಹಾವಿನ ಮುಖ ಕೆತ್ತಿ ಆ ಪೊದರು ಗಿಡಗಳ ನಡುವೆ ನೆಟ್ಟಿದ್ದರು.ಜೋರಾಗಿ ಅರಿಶಿನ ಕುಂಕುಮ ಹಚ್ಚಿದ್ದು ನೋಡಿದರೆ ಜನ ಪೂಜೆ ಮಾಡುತ್ತಾರೆ ಎಂಬುದು ಗೊತ್ತಾಗುತ್ತಿತ್ತು. ಪುರಿ ಬ್ಯಾಗ್ ಇಟ್ಟು ಚಪ್ಪಲಿ ಕಳಚಿ ಕೈ ಮುಗಿದ.ನಾನೂ ಬ್ಯಾಗ್ ಇಟ್ಟೆ..ಶೂ ತೆಗೆಯಲು ಕೈ ಹಾಕಿದ್ದೆ.ಅವನೇ ಬೇಡವೆಂದ.ನನ್ನ ಮುಖ ನೋಡಿ ದೇವರಿಗೆ ಯಾಕೆ ಇವನಿಂದ ಕೈ ಮುಗಿಸಬೇಕೆಂದೆನಿಸಿತೋ ಎನೋ..
ನನಗೆ ದೇವರಿಗೆ ಮೊದಲಿನಿಂದಲೂ ಅಷ್ಟಕಷ್ಟೇ. ಅದು ಪುರಿಗೂ ಗೊತ್ತು.ಅಂದಮಾತ್ರಕ್ಕೆ ನಾನು ನಾಸ್ತಿಕನಲ್ಲ.ದೇವರನ್ನು ಬೇರೆಲ್ಲೋ ಹುಡುಕುವವ ನಾನು. ಈ ಕಲ್ಲಿನಲ್ಲಿ, ಗುಡಿಯಲ್ಲಿ ಕಾಣುವುದು ದೇವರಲ್ಲ ಅಂತ ಹಾಸ್ಟೆಲ್ನಲ್ಲಿ ಭಾಷಣ ಬಿಗಿದಿದ್ದೆ.ಕೆಲವರಿಂದ ಚಪ್ಪಾಳೆಯೂ ಸಿಕ್ಕಿತ್ತು.ಈಗ ಪುರಿಯ ಭಾವನೆಗೆ,ಈ ಸುಂದರ ಊರಿನ ಜನರ ನಂಬಿಕೆಗೆ ಬೆಲೆ ಕೊಟ್ಟು ಶೂ ತೆಗೆಯಲು ಕೈಹಾಕಿದ್ದೆ ಅಷ್ಟೇ.ಪುರಿಗೂ ಅದು ಅರ್ಥವಾಯಿತು. ನಮ್ಮೂರಲ್ಲಿ ದೇವರುಗಳು ಜಾಸ್ತಿ..ಸುಮ್ನೆ ದೇವರಿಗೆ ಕೈಮುಗಿಯೋದು ರೂಢಿ ಮಾಡ್ಕೋ..ಹೋದಲ್ಲೆಲ್ಲಾ ಶೂ ಕಳಚುತ್ತಾ ಹೋದರೆ ಶೂ ಕಾಲನ್ನು ಬಿಟ್ಟೇ ಇರುತ್ತದೆ.. ಮುಂದಿನ ಹೆಜ್ಜೆಗೇ ಬಂದ ಬಲೆಯೊಂದಕ್ಕೆ ಬ್ರಹ್ಮ ರಾಕ್ಷಸ ಎಂದು ಕೈಮುಗಿಯಲು ನಿಂತಾಗಲೇ ಅದು ನಿಜ ಎಂದೆನಿಸಿತು.ಆದರೆ ರಾಕ್ಷಸನಿಗೆ ಯಾಕೆ ಪೂಜೆ ..ಅರ್ಥವಾಗಲಿಲ್ಲ.
ಪುರಿ ಸ್ವಲ್ಪ ಬೇಗನೆ ನಡೆಯಲು ಪ್ರಾರಂಭಿಸಿದ.ಅಂದುಕೊಂಡೆ ಮನೆ ಬಂದಿರಬೇಕು. ಮಾತನಾಡುವ ಉತ್ಸಾಹ ನನಗಿರಲಿಲ್ಲ. ಅವನೇ ಮುಂದುವರಿದ ನಮ್ಮೂರು ವರಾಹ ದೇವಾಲಯಕ್ಕೆ ತುಂಬ ಪ್ರಸಿದ್ಧಿ. ಇಲ್ಲಿನ ವರಾಹ ಸ್ವಾಮಿಗೆ ಭಯಂಕರ ಶಕ್ತಿ ಎಂದು ನಂಬಿಕೆ.ಊರು ಕಾಯುವ ದೈವ ಅದು.. ನಾ ಕೇಳಿದೆ ಎಲ್ಲಿದೆ..? ಇಲ್ಲೇ ಇನ್ನೇನು ಐದೇ ನಿಮಿಷ.. ಅಬ್ಬ ಐದು ನಿಮಿಷಗಳಾದ ಮೇಲೆ ಬ್ಯಾಗ್ ಇಡಲು ಒಂದು ನೆಪವಾಯಿತು ಅಂದುಕೊಂಡೆ. ಈಗ ದಾರಿ ಸ್ವಲ್ಪ ಅಗಲವಾಗುತ್ತಾ ಬಂತು. ಜನರ ವಾಸ ಹತ್ತಿರವಿದ್ದಂತನಿಸಿತು. ಸೂರ್ಯ ಇನ್ನೂ ಸುಡಲು ಪ್ರಾರಂಭಿಸಿರಲಿಲ್ಲ.ಪವರ್ ಕಡಿಮೆಯಾದ ಟಾರ್ಚ್ನಂತೆ ಮಂದ ಬೆಳಕನ್ನು ಕೊಡುತ್ತಿದ್ದ.ಅದು ಆ ಮಂಜಿನಲ್ಲಿ ಕರಗಿ ಮಂಜನ್ನೂ ಕರಗಿಸಲು ಪ್ರಯತ್ನಿಸುತ್ತಿತ್ತು.ದೇವಾಲಯದ ಕಳಸವೊಂದು ಕಾಣಿಸಿತು. ಅಂದುಕೊಂಡೆ ಇದೇ ಇರಬೇಕು ವರಾಹ ಸ್ವಾಮಿ ದೇವಸ್ಥಾನ.. ಬೆಳಿಗ್ಗೆಯೆು ಸುಮಾರು ಜನರಿದ್ದರು.. ಇಷ್ಟು ಬೆಳ್ಳಂಬೆಳಗ್ಗೆನೇ ದೇವಸ್ಥಾನಕ್ಕೆ ಜನ ಬರುತ್ತಾರಾ...? ಪ್ರಶ್ನಿಸಿದೆ. ಅವನು ಮೌನವಾದ.ಆತನ ಕುತೂಹಲ ತುಂಬಿದ ಕಣ್ಣೇ ಹೇಳಿತು.ಇದು ಪ್ರತಿದಿನದಂತೆ ಅಲ್ಲ.ಇಂದೇನೋ ವಿಶೇಷವಿರಬೇಕು..
ನಿನ್ನೆ ರಾತ್ರಿ ನಿಮ್ಮನೆ ತೋಟಕ್ಕೆ ಬಂದ ಹಂದಿ ದೇವಸ್ಥಾನದ ಜಾಗದಲ್ಲಿ ಸತ್ತು ಬಿದ್ದಿದೆ. ಎಲ್ಲಾ ಮೈಲಿಗೆ ಆಯಿತಂತೆ. ಬ್ಯಾಗ್ ಇಡುತ್ತಿದ್ದಂತೆ ಪಕ್ಕದಲ್ಲಿಂದ ಧ್ವನಿ ಕೇಳಿ ಬಂತು.ಪುರಿ ಪ್ರತಿಕ್ರಿಯಿಸಿದ. ಯಾವುದು..... ದೇವಸ್ಥಾನದ ಹಂದಿಯಾ?.. ಭಯ ಹಾಗೂ ಕುತೂಹಲ ಮುಖದಲ್ಲಿತ್ತು... ಅಲ್ಲ ಅದಲ್ಲ ....ಯಾವುದೋ ಕಾಡ್ ಹಂದಿ.. ಸಮಾಧಾನವಾಯಿತು.
ನಿಮ್ಮಪ್ಪ ಕರೆಂಟ್ ಬೇಲಿ ಸ್ವಿಚ್ ಹಾಕಿಯೆು ಮಲ್ಕೊಂಡಿದ್ನಂತೆ..ಹಂದಿ ರಾತ್ರಿ ಪಂಜರಗಡ್ಡೆ ಬುಡ ಕೆದರಿ ಕರೆಂಟ್ ಬೇಲಿ ಹಾರಿದೆ..ಶಾಕ್ ಹೊಡೆಸಿಕೊಂಡು ಸತ್ತಿತು... ಹಂದಿಯನ್ನು ನೋಡಿದೆ.ವಿಕಾರವಾಗಿ ಬಾಯಿ ತೆರೆದು ಬಿದ್ದಿತ್ತು. ಕರೆಂಟ್ ಬೇಲಿಯ ಗೂಟಗಳೂ ಹತ್ತಿರ ಬಿದ್ದಿದ್ದವು. ಬೇಲಿಯ ತಂತಿ ಹಂದಿಯ ಕಾಲಿಗೆ ಸುತ್ತಿತ್ತು. ಬಾಯಿಂದ ಬಂದ ರಕ್ತ ಹೆಪ್ಪುಗಟ್ಟಿ ಕರ್ರಗಾಗಿತ್ತು..ನಾನಲ್ಲಿ ಸೈಂಟಿಸ್ಟ್ ತರ ಬಗ್ಗಿ ಬಗ್ಗಿ ನೋಡುತ್ತಿದ್ದೆ.ಉಳಿದವರೆಲ್ಲಾ ನನ್ನನ್ನೇ ನೋಡುತ್ತಿದ್ದಾರೆಂದು ಸುಮ್ಮನಾದೆ.
ಅಲ್ಲ ವೆಂಕಟ್ರಮಣನಿಗೆ ಬುದ್ಧಿ ಬೇಡವಾ..ದೇವಸ್ಥಾನದ ಗಡಿಯವರೆಗೂ ತನ್ನ ಬೇಲಿ ಹಾಕಿದ ..ಈಗ ನೋಡು ಏನಾಯಿತು.. ಹೌದು ಮತ್ತೆ..ದೇವಸ್ಥಾನದ ಜಾಗ ಹೊಡೆಯಲು ನೋಡಿದರೆ ಆಗುವುದೇ ಹೀಗೆ.. ಅಲ್ಲ ಅವನಿಗಾದ್ರೂ ಏನ್ ಗೊತ್ತಿತ್ತು..ಜಾಗ ಅವನದ್ದು ಅಂತ ಬೇಲಿ ಹಾಕಿದ..ಈ ಹಂದಿ ನೋಡಿಕೊಂಡು ಹೋಗಿ ದೇವಸ್ಥಾನದ ಗಡಿಯಲ್ಲೇ ಬೇಲಿ ಹಾರ್ಬೇಕಿತ್ತೇ...? ಅಲ್ಲಿದ್ದ ಜನರಾಡುವ ಮಾತುಗಳನ್ನು ಕೇಳಿ ವಿಚಿತ್ರವೆನಿಸಿತು. ಒಂದು ಮೂಕ ಪ್ರಾಣಿ ಸತ್ತದ್ದಕ್ಕೆ ಈ ರೀತಿಯ ವಿವರಣೆ, ವಿಮರ್ಶೆ ಕೇಳಿ ಬೆಂಗಳೂರಿನ ನೆನೆಪಾಯಿತು. ಅಲ್ಲಿ ಮನುಷ್ಯ ಸತ್ತರೂ ಈ ರೀತಿ ಚರ್ಚೆಯಾಗಲಾರದು.. ಊರಿನ ಜನರ ಮುಗ್ಧತೆಗೆ ವಂದಿಸಿದೆ.
ವೆಂಕಟರಮಣ ಅಂದಾಗ ನೆನಪಾಯಿತು.ಅವರು ಪುರಿಯ ತಂದೆ ಎಂದು. ಕ್ಲಾಸಿನಲ್ಲಿ ಒಮ್ಮೆ ನಮ್ಮ ಪುರಿಯ ಹಾಜರಾತಿ ಕರೆವಾಗ ನಮ್ಮ ಸೈಯನ್ಸ್ ಟೀಚರ್ ಒಬ್ಬರು 'ಪುರುಷೋತ್ತಮ್ ವೆಂಕಟಮರಣ ಭಾಗವತ್' ಅಂತ ಕರೆದದ್ದು ಇನ್ನೂ ನೆನಪಿದೆ. 'ರಮಣನಾಗುವುದೆಂದರೆ ಮರಣವೇ' ಎರಡೂ ಸಮನಾರ್ಥಕ ಪದಗಳಿದ್ದಂತೆ ಎಂದು ಗೆಳೆಯರ ಬಳಿ ನನ್ನ ಪದಸಂಪತ್ತಿನ ಕೌಶಲ್ಯವನ್ನು ಮೆರೆದಿದ್ದೆ.....ಗುಂಪಿನಲ್ಲಿ ಮುದಿ ಹೆಣ್ಣು ದನಿಯೊಂದು ಪಕ್ಕದಲ್ಲಿದ್ದ ಇನ್ನೊಬ್ಬಳ ಕಿವಿಯಲ್ಲಿ ಉಸುರಿದ್ದು ಎಲ್ಲರಿಗೂ ಕೇಳಿತು.. ಹಂದಿ ದೇವಸ್ಥಾನದ ಜಾಗದಲ್ಲಿ ಬಂದು ಸತ್ತಿರುವುದನ್ನು ನೋಡಿದರೆ ದೇವರ ಅಂಶವೇ ಇರಬೇಕು..ದೇವ್ರೇ ಊರಿಗೇನೂ ಆಗ್ದೇ ಇರ್ಲಪ್ಪಾ.
ಚಿಕ್ಕಪ್ಪ .. ಅಪ್ಪ ಎಲ್ಲಿ? ... ನಂಗೂ ಗೊತ್ತಿಲ್ಲ ನಿನ್ನೆ ರಾತ್ರಿ ಆಟ ಇತ್ತು..ಈಗ್ ಬಂದೇ ಇನ್ನೂ ಮನೆಗೂ ಹೋಗಿಲ್ಲ..ಅಣ್ಣ ಪಂಚಾಂಗ ತರಲು ಜೋಯಿಸರ ಜೋಡಿ ಮನೆಗೆ ಹೋಗಿರಬೇಕು..ಯಾರೋ ಅಂದ್ರು. ಆಗ ಗೊತ್ತಾಯಿತು ಇಷ್ಟೊತ್ತು ಪುರಿಯ ಜೊತೆ ಮಾತಾಡಿದ್ದು ಅವನ ಚಿಕ್ಕಪ್ಪ ಎಂದು.
ನೋಡಿದರೆ ಅವನ ಚಿಕ್ಕಪ್ಪ ಎಂದ ಹೇಳಲು ಸಾಧ್ಯವೇ ಇಲ್ಲ.ಪುರಿ ಚಿಕ್ಕಪ್ಪನ ಬಗ್ಗೆ ಮೊದಲೇ ಹೇಳಿದ್ದ.ಅವನ ಅಪ್ಪನಿಗಿಂತಲೂ ಹೆಚ್ಚಾಗಿ..ಅವನ ಚಿಕ್ಕಪ್ಪ ಯಕ್ಷಗಾನ ಕಲಾವಿದರು..ಶ್ರೀಧರ ಭಾಗವತ್ ಅಂತ ಅವರ ಹೆಸರು..ಆಟ ಆಟ ಅಂತ ತಿರುಗುತ್ತಲೇ ಇರ್ತಾರೆ..ಮನೆಯಲ್ಲಿರೋದೇ ಕಡಿಮೆ..ಇನ್ನೊಮ್ಮೆ ಅವರನ್ನು ಗಮನಿಸಿದೆ. ದಪ್ಪ ಮುಖ, ಎಣ್ಣೆಗಪ್ಪು ಬಣ್ಣ, ಪೂರ್ತಿ ಹಿಂದೆ ಬಾಚಿದ ಕಪ್ಪು ಕೂದಲು..ಅಲ್ಲಲ್ಲಿ ಬೆಳ್ಳಿ ರೇಖೆಗಳನ್ನು ಗಮನಿಸದೇ ಇದ್ದರೆ ಯುವಕರೆಂದೇ ಹೇಳಬಹುದು..ಮೀಸೆ ತೆಗೆದು ಹುಬ್ಬುಗಳನ್ನು ತೀಡಿದ ರೀತಿ ನೋಡಿ ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳನ್ನೂ ಗಂಡಸರೇ ಮಾಡುತ್ತರೆಂಬುದಕ್ಕೆ ಸಮರ್ಥನೆ ಸಿಕ್ಕಂತಾಯಿತು. 'ಶ್ರೀಧರ ಭಾಗವತರ ಹೆಣ್ಣು ವೇಷ' ಎಂದು ಕರಪತ್ರಗಳಲ್ಲಿ ಮುದ್ರಿಸುವಷ್ಟು ಪ್ರಸಿದ್ಧಿ ನಮ್ಮ ಚಿಕ್ಕಪ್ಪ ಎಂದು ಪುರಿ ಹೇಳುತ್ತಿದ್ದ. ಕಿವಿಯ ಹತ್ತಿರ ರಾತ್ರಿ ಹಚ್ಚಿದ ಬಣ್ಣ ಹಾಗೇ ಉಳಿದಿತ್ತು. ಹಂದಿ ಸತ್ತ ವಿಷಯ ಕೇಳಿ ಚೌಕಿ ಮನೆಯಿಂದ ವೇಷ ಕಳಚಿ ಬಣ್ಣ ಒರೆಸಿಕೊಂಡು ಓಡಿ ಬಂದಿರುವುದನ್ನು ಅವರೇ ಹೇಳಿದರು.
ಅವರ ಹೆಂಡತಿಗಾಗಿ ಕಣ್ಣು ಹುಡುಕ ತೊಡಗಿತು. ಎಲ್ಲಿ ಆ ಹೆಂಗಸು. ಪುರಿಯೋ ಆಕೆಯನ್ನು ಸಾಕ್ಷಾತ್ ತಾಟಕಿಯಂತೆ ಬಿಂಬಿಸಿದ್ದ. ಆಕೆಯ ಸಲುವಾಗಿಯೆು ಮನೆ ಒಡೆದದ್ದು..ಈಗ ಚಿಕ್ಕಪ್ಪ ಬೇರೆ ವಾಸವಾಗಿರುವುದು ಎಂಬುದಾಗಿ ಆಕೆಯ ಗುಣಗಾನ ಮಾಡಿದ್ದ..ಅವಳೇ ಇರಬೇಕು..ಚಿಕ್ಕಪ್ಪನ ಪಕ್ಕದಲ್ಲೇ ನಿಂತಿದ್ದಾಳೆ..ಸಿಡುಕು ಮೂತಿ..ಕೋರೆ ಹಲ್ಲು ಉದ್ದವಿದ್ದರೆ ತಾಟಕಿ ಎನ್ನಬಹುದೇನೋ..ಹೇಗೆ ಶ್ರೀಧರ ಭಾಗವತರಿಗೆ ಗಂಟು ಬಿದ್ದಳು ಎಂದು ಕೇಳಬೇಕೆನಿಸಿತು..ಬೇರೆಯವರ ವಿಚಾರ ನಮಗ್ಯಾಕೆ ಎಂದು ಸುಮ್ಮನಾದೆ...ಅವರ ಮಗನೇ ಇರಬೇಕು..ಅಮ್ಮನ ಕೈಯಿಂದ ಕೊಸರಿಕೊಂಡು ಹಂದಿ ನೋಡಲು ಧಾವಿಸಿದ್ದ... ಮರೀ ನಿನ್ನ ಹೆಸರೇನೋ.? ಮಗುವನ್ನು ಕೇಳಿದೆ. ಬಾಲಚಂದ್ರ.. ಅವನಮ್ಮ ಉತ್ತರಿಸಿದಳು.. ಬಾರೋ... ಅಧಿಕಪ್ರಸಂಗಿ.. ಅವನನ್ನು ಎಳೆದುಕೊಂಡು ಹೋದಳು. ನಾನು ಸುಮ್ಮನಾದೆ..ಅಧಿಕ ಪ್ರಸಂಗ ಮಾಡಿದ್ದು ನಾನಾಗಿತ್ತು.
ಅಪ್ಪಾ... ಪುರಿ ಹೋಗಿ ಅವರ ಕಾಲಿಗೆ ಬಿದ್ದ.ನಾನೂ ಅನುಕರಿಸಿದೆ. ನನಗರ್ಥವಾಯಿತು. ವೆಂಕಟರಮಣ ಭಾಗವತರು ಇವರೇ.. ನೋಡಲು ಪುರಿಯಂತೆ ಇದ್ದರು.ಆಜಾನು ಬಾಹು. ಲುಂಗಿ ಉಟ್ಟಿದ್ದರು. ಮೇಲೆ ಒಂದು ಟವೆಲ್..ಕೆಂಪು ಬಣ್ಣದ್ದು.ಮೀಸೆ ದಪ್ಪನಾಗಿಯೆು ಇತ್ತು.ಯಾರಾದರೂ ಹೇಳಬಹುದು ವಯಸ್ಸು ಐವತ್ತು ದಾಟಿದೆ ಎಂದು. ನಾನು ಅವರನ್ನು ನೋಡಿ ಉಪಚಾರದ ನಗೆ ನಕ್ಕೆ.ಅವರು ನಗಲಿಲ್ಲ.ನನ್ನನ್ನು ಗಮನಿಸಲೂ ಇಲ್ಲ.ಪುರಿ ಮಾತ್ರ ತಪ್ಪಿಸ್ಥತನಂತೆ ಪಶ್ಚಾತ್ತಾಪದ ನಗೆ ಬೀರಿದ. ನಾನಂದುಕೊಂಡೆ ವಿಷಯ ಗಂಭೀರವಾಗಿದೆ.
ಗುಂಪು ಸರಿದು ದಾರಿ ಮಾಡಿಕೊಡುತ್ತಿದ್ದಂತೆ ದೇವಸ್ಥಾನದ ಉಗ್ರಾಣಿಯೂ ಜೋಯಿಸರೂ ದಡ ದಡನೆ ಬಂದು ದೇವಸ್ಥಾನದ ಒಳ ನಡೆದರು. ಜೋಯಿಸರ ಕೈಲಿದ್ದ ಪಂಚಾಂಗ ಹರಿದು ಹಾಳೆಗಳೆಲ್ಲಾ ಹೊರಬಂದಿದ್ದವು.ಅಲ್ಲೇ ಕಟ್ಟೆಯ ಮೇಲೆ ಕುಳಿತು ಪಂಚಾಂಗ ತಿರುಗಿಸಿ ತಿರುಗಿಸಿ ಏನೇನೋ ಲೆಕ್ಕಾಚಾರ ಮಾಡಹತ್ತಿದರು. ಪುರಿ ಅಪ್ಪನನ್ನು ಕೇಳಿದ ಏನಾಯ್ತು....? ಇನ್ನೇನು ಸುಡುಗಾಡು... ಹಂದಿ ನಮ್ಮನೆ ಬೇಲಿ ತಾಗಿ ಸತ್ತಿದೆಯಂತೆ ..ಎಲ್ಲರೂ ನೋಡಿದವರ ಹಾಗೆ ಮಾತಾಡ್ತಾರೆ.. ನಾವು ಶಾಂತಿ ಮಾಡಿಸಬೇಕಂತೆ... ನನಗರ್ಥವಾಗಲಿಲ್ಲ. ಹಿಂದಿನಿಂದ ಇನ್ನೊಂದು ಧ್ವನಿ ಬಂತು. ಮತ್ತೆ.. ನಮ್ಮನೆ ತೋಟದಲ್ಲಾಗಿದ್ರೆ ನಾವು ಮಾಡಿಸುತ್ತಿರಲಿಲ್ಲವೇನು?.. ನಿನ್ನೆ ನಮ್ಮನೆ ಬೇಲಿ ಸ್ವಿಚ್ಚೇ ಹಾಕಿರಲಿಲ್ಲ. ಅವರು ಆಟಕ್ಕೆ ಹೋಗಿದ್ರು..ನನಗೆ ಮರ್ತೆ ಹೋಯ್ತು..ಈಗ ನೋಡಿದ್ರೆ ಮರೆತು ಹೋಗಿದ್ದು ಒಳ್ಳೇದಾಯಿತು ..ಇಲ್ದೇ ಇದ್ರೆ ಹಂದಿ ಯಾರ ಮನೆ ಬೇಲಿ ತಾಗಿ ಸತ್ತಿತು ಅಂತ ಗೊತ್ತೇ ಆಗ್ತಿರ್ಲಿಲ್ಲ... ಅದೇ ಹೆಂಗಸು ಮಾತಾಡಿದ್ದು.
ಆ ಮಾತುಗಳು ಸ್ವಗತವಾಗಿದ್ದರೂ ಅದು ವೆಂಕಟ್ರಮಣ ಭಾಗವತರಿಗೆ ಹೇಳಿದ್ದು ಬಿಂಬಿತವಾಗಿತ್ತು.ಅವಳ ಧ್ವನಿಯಲ್ಲಿ ತಪ್ಪು ಮಾಡಿದವರು ನೀವೇ ಈಗ ಅನುಭವಿಸಿ ಎಂಬ ಧೋರಣೆ ಇತ್ತು. ಜೊತೆಗೆ ನಾವು ತಪ್ಪಿಸ್ಥತರಲ್ಲ..ಎಂಬ ವಿಜಯದ ಛಾಯೆುಯೂ..
ಭಾಗವತರು ಮಾತಾಡಲಿಲ್ಲ.
ಜೋಯಿಸರು ಕಟ್ಟೆಯ ಮೇಲಿಂದ ಇಳಿದರು.ಬಾಯಲ್ಲಿದ್ದ ವೀಳ್ಯವನ್ನು ಅಲ್ಲೇ ಪುಚಕ್ಕನೆ ಉಗುಳಿದರು..ತಮ್ಮ ಕೆಂಪು ಕೆಂಪಾದ ಹಲ್ಲುಗಳನ್ನು ತೋರಿಸುತ್ತಾ ಮುಂದಿನ ಸೋಮವಾರ ಒಳ್ಳೇ ದಿನ.. ದೇವಸ್ಥಾನದಲ್ಲೇ ವರಾಹ ಶಾಂತಿ ಮಾಡಿಸಿಬಿಡೋಣ..ಯಾಕೇಂದ್ರೆ ಮಂಗಳವಾರ ನನಗೆ ವಿಶ್ವನಾಥನ ಮನೆಯ ತಿಥಿಗೆ ಹೋಗಬೇಕು..ಬೇರೆ ಯಾರೂ ಸಿಕ್ತಾ ಇಲ್ಲಾ..ನೀವೇ ಬರಬೇಕು ಅಂತ ವಿಶ್ವನಾಥ ಫೋನ್ ಮಾಡಿದ್ದಾ..ಹ್ಹಿ..ಹ್ಹಿ.. ಅಂದರು. ಮಂಗಳವಾರ ತಿಥಿಗೆ ಹೋಗಬೇಕೆಂದೇ ಸೋಮವಾರ ಒಳ್ಳೆಯ ದಿನವೇ ..ಎಂದು ಕೇಳಬೇಕೆಂದುಕೊಂಡೆ.. ಭಾಗವತರು ಹೂಂ.. ಸರಿ ಮಾಡಲೇಬೇಕು ಅಂತಂದ್ರೆ ಮಾಡೋದೇ..ಇನ್ನೇನ್ ಮಾಡೋಕಾಗತ್ತೆ..ಏನೇನ್ ಸಾಮಾನು ಬೇಕು ಹೇಳಿ..ಪಟ್ಟಿ ಕೊಡಿ..ತರೋಣ.. ಹೇಳಿ ಹೊರಟರು.
ಬ್ಯಾಗ್ ಎತ್ಕೋ..ಹೊರಡೋಣ.. ಅಪ್ಪನ ಕಡೆ ತಿರುಗಿ ನೋಡುತ್ತಾ ಪುರುಷೋತ್ತಮ ನನಗಂದ.ಅವನಪ್ಪ ಬಿರಬಿರನೆ ನಡೆಯುತ್ತಿದ್ದರು.ಅವರಿವರ ಮುಖ ನೋಡಿ ಎನೇನೋ ಅರ್ಥೈಸಿಕೊಳ್ಳುತ್ತಿದ್ದ ನನಗೆ ಬ್ಯಾಗ್ ಎಲ್ಲಿಟ್ಟೆ ಎಂದು ಮರೆತೇ ಹೋಗಿತ್ತು..ದೇವಸ್ಥಾನದ ಕಟ್ಟೆ ಮೇಲಿದ್ದ ಬ್ಯಾಗ್ ತನಗೇನೂ ಸಂಬಂಧವಿಲ್ಲದವರಂತೆ ನಿದ್ರಿಸುತ್ತಿತ್ತು. ಬ್ಯಾಗ್ ಹಿಡಿದು ಪುರಿಯ ಬೆನ್ನು ಹತ್ತಿದೆ. ನನಗರ್ಥವಾಗದ ಕೆಲ ವಿಷಯಗಳ ಮಾಹಿತಿ ನೀಡುವ ಮುಖ ಮಾಡಿದ ಪುರಿ...
ನಮ್ಮನೆ ತೋಟ ಇರೋದು ದೇವಸ್ಥಾನದ ಅಂಚಿಗೆ..ದಿನಾ ದನಗಳ, ಹಂದಿಗಳ ಕಾಟ ತಡೆಯಲಾರದೆ ಇತ್ತೀಚಿಗೆ ಅಪ್ಪ ಕರೆಂಟ್ ಬೇಲಿ ಹಾಕಿದ್ದರು..ಈ ಕರೆಂಟ್ ಬೇಲಿ ಮುಟ್ಟಿ ಯಾರೂ ಸಾಯುವುದಿಲ್ಲ..ಹೆದರಬೇಡಿ...ಅಂತ ಆ ಎಲೆಕ್ಟಿಶಿಯನ್ ಪಾಂಡು ಹೇಳಿದ್ದ..ಈ ಹಂದಿ ಹೇಗೆ ಸತ್ತಿತೋ ಏನೋ... ದೇವಸ್ಥಾನ ತೋಟದ ಪಕ್ಕದಲ್ಲಿದ್ದದ್ದು ದೇವರ ತಪ್ಪು..ಕರೆಂಟ್ ಬೇಲಿ ಮುಟ್ಟಿದ್ದು ಹಂದಿ ತಪ್ಪು ..ನಾವೇನೂ ಮಾಡ್ಲಿಲ್ಲ..ಎಂಬ ಭಾವ ಅದರಲ್ಲಿತ್ತು. ವೆಂಕಟ್ರಮಣ ಭಾಗವತರೋ ಸುಮ್ಮನೆ ನಡೆಯುತ್ತಿದ್ದರು. ಸೌಜನ್ಯಕ್ಕೂ ಒಮ್ಮೆಯೂ ಮಾತಾಡಲಿಲ್ಲ..ಪುರಿ ಮೊದಲೇ ಹೇಳಿದ್ದ..ಅಪ್ಪ ಜಾಸ್ತಿ ಮಾತಾಡಲ್ಲ ಅಂತ..
ಈ ದರಿದ್ರ ಹಂದಿಗೆ ಬೇರೆ ಜಾಗ ಸಿಗಲಿಲ್ಲವೇ..ಸಾಯಲಿಕ್ಕೆ...ಬಂದು ಬಂದು ನಮ್ಮನೆ ತೋಟದಲ್ಲೇ ಬೀಳಬೇಕೆ..ಅದೂ ದೇವಸ್ಥಾನದ ಬದಿ ಅಂಚಿಗೆ..ಎಲ್ಲಾ ನನ್ನ ಪ್ರಾರಬ್ಧ... ಯಾರ್ಯಾರಿಂದಲೋ ಎನೇನೋ ಕೇಳ್ಬೇಕಾಯ್ತು... ಸುಮ್ಮನೆ ಗೊಣಗಿದರು ಭಾಗವತರು. ಯಾರ್ಯಾರೋ ಎಂಬುದು ತನ್ನ ತಮ್ಮನ ಹೆಂಡತಿಗೆ ಎನ್ನುವುದು ತಿಳಿಯಿತು.. ಒಂದು ಮೂಕ ಪ್ರಾಣಿ ಸತ್ತಾಗ ತಮ್ಮ ಗೆಣಸು ಬೇಯಿಸುವ ಜೋಯಿಸರಂತ ಜನ ಒಂದು ಕಡೆ...ತಮ್ಮ ವೈರತ್ವವನ್ನು ಸಾಧಿಸುವ ಚಿಕ್ಕಮ್ಮನಂತವರು ಇನ್ನೂಂದೆಡೆ... ಏನೂ ಮಾಡಲಿಕ್ಕಾಗದೆ ಗೊಣಗುವ ಪುರಿ,ಭಾಗವತರಂತವರು ಮತ್ತೊಂದು ಕಡೆ..ಇವುಗಳ ನಡುವೆ ಸುಮ್ಮನೆ ಕುಳಿತಿದ್ದ ಬ್ಯಾಗೇ ತೂಕವಾಗಿ ಕಂಡಿತು.
ಇವನು ನನ್ನ ಫ್ರೆಂಡ್.. ಹೇಳಿದ್ನಲ್ಲಾ.. ಪುರಿ ಪರಿಚಯ ಭಾಷಣ ಮಾಡಿದ ದಾರಿಯಲ್ಲೇ.. ನಮಸ್ಕಾರ ಅಂಕಲ್.. ಕೈ ಮುಗಿದೆ. ಅವರು ಈ ಸಾರಿ ನಕ್ಕರು.. ಹಿನ್ನೆಲೆಯಲ್ಲಿ ಬೇಸರ ಇಣುಕಿದ್ದನ್ನು ನಾನು ನೋಡಿದೆ..
ರೈಟ್..... ಬಸ್ ಹೊರಟಿತು. ಸುತ್ತಲಿನ ನೀಲಿ ಬಣ್ಣ ಮಾಯವಾಗಿ ಹಸಿರಾಯಿತು. ಏಯ್ ಈ ಕಡೆ ಬಾರೋ.. ಪುರಿ ಬ್ಯಾಗ್ ಹಿಡಿದು ಮುಂದಕ್ಕೆ ಹೊರಟ.ನಾನು ಹಿಂಬಾಲಿಸಿದೆ.ಪುರಿಯ ಚಪ್ಪಲಿ ಬಸ್ ಹತ್ತುವಾಗ ಬಾಗಿಲಿಗೆ ಸಿಕ್ಕಿ ಹರಿದಿತ್ತು.ಅದು ದಾರಿಯಂತಿರಲಿಲ್ಲ.ವರ್ಷಕ್ಕೆ ಒಮ್ಮೆ ಜನ ಓಡಾಡುವ ದಾರಿಯಿರಬೇಕು ಅಂದುಕೊಂಡೆ.ಪುರಿ ಹರಿದ ಚಪ್ಪಲಿಯ ಕಾರಣದಿಂದ ನಿಧಾನವಾಗಿ ಕಾಲೆಳೆಯುತ್ತಿದ್ದ ಪುರಿ ಕಾಲಿಗೆ ಸಿಕ್ಕ ಒಣ ಎಲೆಗಳನ್ನು ಬದಿಗೆ ಸರಿಸುತ್ತಾ ದಾರಿ ಮಾಡುತ್ತಿದ್ದ.
ಮರಗಳು ಈ ಚಳಿಗಾಲದಲ್ಲಿ ಎಲೆ ಉದುರಿಸಿ ಉದುರಿಸಿ ದಾರಿ ಮುಚ್ಚಿಬಿಡುತ್ತವೆ.. ಅವನಂದ.
ನಾನೂ ಓದಿದ್ದೆ..ಚಳಿಗಾಲದಲ್ಲಿಎಲೆ ಉದುರಿಸುವ ಮರಗಳು..ಈಗ ಕಂಡಂತಾಯಿತು..ಅಲ್ವೋ ಇದೇ ಎನೋ ನಿಮ್ಮೂರಿನ ರೆಡ್ ಕಾರ್ಪೆಟ್ ಸ್ವಾಗತ..
ಯಾಕೋ ..ಬ್ಯಾಗ್ ಭಾರವಾಗಿದೆಯಾ..ಹಿಡ್ಕೊಳ್ಲಾ?...
ಪಾಪ ಅವನದೇ ಅವನಿಗೆ ಭಾರವಾಗಿದೆ.ನನ್ನದೇಕೆ ಅವನಿಗೆ ಕೊಡಲಿ..? ಮೊದಲೇ ಚಪ್ಪಲಿ ಹರಿದಿದೆ.ಇನ್ನು ಈ ದಾರಿ ನೋಡಿದರೆ ವನವಾಸದಲ್ಲಿ ರಾಮ ಅನುಭವಿಸಿದ ಕಷ್ಟಗಳಲ್ಲಿ ಇದೂ ಒಂದಿರಬಹುದು ಅನಿಸುತ್ತಿದೆ.ಬೆಂಗಳೂರಿನಲ್ಲಿ ಬೆಳೆದು ಬದುಕಿದ ನನಗೆ ಈ ರೀತಿ ನಡೆದು ಅಭ್ಯಾಸವಿಲ್ಲ ನಿಜ. ಆದರೆ ಆಸಕ್ತಿ ಇದೆಯಲ್ಲಾ..ಅದಕ್ಕೆ ತಾನೇ ಪುರಿ ಕರೆದ ತಕ್ಷಣ ರಜ ಕಳೆಯಲು ಇಲ್ಲಿಗೆ ಬಂದಿದ್ದು. ಹೀಗಾಗಿ ಅವನಿಗೇ ಪುನಃ ಭಾರ ಹೊರಿಸುವುದು ಸರಿಯಲ್ಲಇಂದೆನಿಸಿ ಸುಮ್ಮನಾದೆ. ಬ್ಯಾಗ್ ಹೊತ್ತು ನಾನೂ ಕಾಲೆಳೆಯತೊಡಗಿದೆ.
ಅಯ್ಯುಮ್ಮಾ..ಸುಸ್ತೋ ಸುಸ್ತು ಬಾಯಿ ಹೇಳದಿದ್ದರೂ ಮುಖ ಹೇಳುತ್ತಿತ್ತು.ಪ್ರತಿ ಹೆಜ್ಜೆಗೂ ಬ್ಯಾಗ್ ಭಾರವಾಗುತ್ತಿದೆಯೋ ಹೇಗೆ ಎಂಬ ಅನುಮಾನವೂ ಬಂತು.ಪುರಿ ಮೊದಲೇ ಹೇಳಿದ್ದ.ಸುತ್ತಲೂ ಹಸಿರು.ಗಿಡಮರಗಳ ತಂಪಿನಲ್ಲಿ ನಡೆದುಕೊಂಡು ಹೋಗಬೇಕು.ಬೆಳಿಗ್ಗೆಗೂ ಮಧ್ಯಾಹ್ನಕ್ಕೂ ಭೇದವಿಲ್ಲದೇ ನೆರಳು ನೀಡುವ ಮರಗಳು....ಪೊದೆಗಳ ನಡುವೆ ಕುಳಿತು ಕಿರುಚುವ ಕಾಡಿನ ಕೀಟವರ್ಗ....ಹಕ್ಕಿಗಳ ಚಿಲಿಪಿಲಿಗೆ ಸ್ಪರ್ಧಿಸುವ ನೀರಿನ ಜುಳುಜುಳು...ಇನ್ನೂ ಎನೇನೋ.. ಅವೆಲ್ಲಾ ಇದೆ ನಿಜ..ಆದರೆ ಹಾಳಾದ ಈ ಬ್ಯಾಗ್ ಇರಬಾರದಿತ್ತು.ಹದಿನೈದು ದಿನಗಳ ಮಟ್ಟಿಗೆ ಪುರಿಯ ಮನೆಗೆ ಹೋಗುತ್ತೇನೆ ಎಂದಾಗ ಅಮ್ಮ ನಾಲ್ಕು ಜೀನ್ಸ್,ಆರು ಶರ್ಟ್ ಹಾಕಿ ಬ್ಯಾಗ್ ಕೊಟ್ಟಿದ್ದಳು.ನಾನು ಜೊತೆಗೆ ಎರಡೆರಡು ಶೂ ,ಸ್ವೆಟರ್,ನನ್ನ ವಿಡಿಯೋ ಗೇಮ್ ಸೇರಿಸಿ ಇದೇನೂ ಭಾರವಿಲ್ಲ ಅಂದುಕೊಂಡು ಬಸ್ ಏರಿದ್ದೆ...
ಇದೇ ನೋಡೋ..ನಾಗರ ಕಲ್ಲು..ಹೆಸರಿಗೆ ತಕ್ಕಂತೆ ಕಲ್ಲಿನಲ್ಲಿ ನಾಗರ ಹಾವಿನ ಮುಖ ಕೆತ್ತಿ ಆ ಪೊದರು ಗಿಡಗಳ ನಡುವೆ ನೆಟ್ಟಿದ್ದರು.ಜೋರಾಗಿ ಅರಿಶಿನ ಕುಂಕುಮ ಹಚ್ಚಿದ್ದು ನೋಡಿದರೆ ಜನ ಪೂಜೆ ಮಾಡುತ್ತಾರೆ ಎಂಬುದು ಗೊತ್ತಾಗುತ್ತಿತ್ತು. ಪುರಿ ಬ್ಯಾಗ್ ಇಟ್ಟು ಚಪ್ಪಲಿ ಕಳಚಿ ಕೈ ಮುಗಿದ.ನಾನೂ ಬ್ಯಾಗ್ ಇಟ್ಟೆ..ಶೂ ತೆಗೆಯಲು ಕೈ ಹಾಕಿದ್ದೆ.ಅವನೇ ಬೇಡವೆಂದ.ನನ್ನ ಮುಖ ನೋಡಿ ದೇವರಿಗೆ ಯಾಕೆ ಇವನಿಂದ ಕೈ ಮುಗಿಸಬೇಕೆಂದೆನಿಸಿತೋ ಎನೋ..
ನನಗೆ ದೇವರಿಗೆ ಮೊದಲಿನಿಂದಲೂ ಅಷ್ಟಕಷ್ಟೇ. ಅದು ಪುರಿಗೂ ಗೊತ್ತು.ಅಂದಮಾತ್ರಕ್ಕೆ ನಾನು ನಾಸ್ತಿಕನಲ್ಲ.ದೇವರನ್ನು ಬೇರೆಲ್ಲೋ ಹುಡುಕುವವ ನಾನು. ಈ ಕಲ್ಲಿನಲ್ಲಿ, ಗುಡಿಯಲ್ಲಿ ಕಾಣುವುದು ದೇವರಲ್ಲ ಅಂತ ಹಾಸ್ಟೆಲ್ನಲ್ಲಿ ಭಾಷಣ ಬಿಗಿದಿದ್ದೆ.ಕೆಲವರಿಂದ ಚಪ್ಪಾಳೆಯೂ ಸಿಕ್ಕಿತ್ತು.ಈಗ ಪುರಿಯ ಭಾವನೆಗೆ,ಈ ಸುಂದರ ಊರಿನ ಜನರ ನಂಬಿಕೆಗೆ ಬೆಲೆ ಕೊಟ್ಟು ಶೂ ತೆಗೆಯಲು ಕೈಹಾಕಿದ್ದೆ ಅಷ್ಟೇ.ಪುರಿಗೂ ಅದು ಅರ್ಥವಾಯಿತು. ನಮ್ಮೂರಲ್ಲಿ ದೇವರುಗಳು ಜಾಸ್ತಿ..ಸುಮ್ನೆ ದೇವರಿಗೆ ಕೈಮುಗಿಯೋದು ರೂಢಿ ಮಾಡ್ಕೋ..ಹೋದಲ್ಲೆಲ್ಲಾ ಶೂ ಕಳಚುತ್ತಾ ಹೋದರೆ ಶೂ ಕಾಲನ್ನು ಬಿಟ್ಟೇ ಇರುತ್ತದೆ.. ಮುಂದಿನ ಹೆಜ್ಜೆಗೇ ಬಂದ ಬಲೆಯೊಂದಕ್ಕೆ ಬ್ರಹ್ಮ ರಾಕ್ಷಸ ಎಂದು ಕೈಮುಗಿಯಲು ನಿಂತಾಗಲೇ ಅದು ನಿಜ ಎಂದೆನಿಸಿತು.ಆದರೆ ರಾಕ್ಷಸನಿಗೆ ಯಾಕೆ ಪೂಜೆ ..ಅರ್ಥವಾಗಲಿಲ್ಲ.
ಪುರಿ ಸ್ವಲ್ಪ ಬೇಗನೆ ನಡೆಯಲು ಪ್ರಾರಂಭಿಸಿದ.ಅಂದುಕೊಂಡೆ ಮನೆ ಬಂದಿರಬೇಕು. ಮಾತನಾಡುವ ಉತ್ಸಾಹ ನನಗಿರಲಿಲ್ಲ. ಅವನೇ ಮುಂದುವರಿದ ನಮ್ಮೂರು ವರಾಹ ದೇವಾಲಯಕ್ಕೆ ತುಂಬ ಪ್ರಸಿದ್ಧಿ. ಇಲ್ಲಿನ ವರಾಹ ಸ್ವಾಮಿಗೆ ಭಯಂಕರ ಶಕ್ತಿ ಎಂದು ನಂಬಿಕೆ.ಊರು ಕಾಯುವ ದೈವ ಅದು.. ನಾ ಕೇಳಿದೆ ಎಲ್ಲಿದೆ..? ಇಲ್ಲೇ ಇನ್ನೇನು ಐದೇ ನಿಮಿಷ.. ಅಬ್ಬ ಐದು ನಿಮಿಷಗಳಾದ ಮೇಲೆ ಬ್ಯಾಗ್ ಇಡಲು ಒಂದು ನೆಪವಾಯಿತು ಅಂದುಕೊಂಡೆ. ಈಗ ದಾರಿ ಸ್ವಲ್ಪ ಅಗಲವಾಗುತ್ತಾ ಬಂತು. ಜನರ ವಾಸ ಹತ್ತಿರವಿದ್ದಂತನಿಸಿತು. ಸೂರ್ಯ ಇನ್ನೂ ಸುಡಲು ಪ್ರಾರಂಭಿಸಿರಲಿಲ್ಲ.ಪವರ್ ಕಡಿಮೆಯಾದ ಟಾರ್ಚ್ನಂತೆ ಮಂದ ಬೆಳಕನ್ನು ಕೊಡುತ್ತಿದ್ದ.ಅದು ಆ ಮಂಜಿನಲ್ಲಿ ಕರಗಿ ಮಂಜನ್ನೂ ಕರಗಿಸಲು ಪ್ರಯತ್ನಿಸುತ್ತಿತ್ತು.ದೇವಾಲಯದ ಕಳಸವೊಂದು ಕಾಣಿಸಿತು. ಅಂದುಕೊಂಡೆ ಇದೇ ಇರಬೇಕು ವರಾಹ ಸ್ವಾಮಿ ದೇವಸ್ಥಾನ.. ಬೆಳಿಗ್ಗೆಯೆು ಸುಮಾರು ಜನರಿದ್ದರು.. ಇಷ್ಟು ಬೆಳ್ಳಂಬೆಳಗ್ಗೆನೇ ದೇವಸ್ಥಾನಕ್ಕೆ ಜನ ಬರುತ್ತಾರಾ...? ಪ್ರಶ್ನಿಸಿದೆ. ಅವನು ಮೌನವಾದ.ಆತನ ಕುತೂಹಲ ತುಂಬಿದ ಕಣ್ಣೇ ಹೇಳಿತು.ಇದು ಪ್ರತಿದಿನದಂತೆ ಅಲ್ಲ.ಇಂದೇನೋ ವಿಶೇಷವಿರಬೇಕು..
ನಿನ್ನೆ ರಾತ್ರಿ ನಿಮ್ಮನೆ ತೋಟಕ್ಕೆ ಬಂದ ಹಂದಿ ದೇವಸ್ಥಾನದ ಜಾಗದಲ್ಲಿ ಸತ್ತು ಬಿದ್ದಿದೆ. ಎಲ್ಲಾ ಮೈಲಿಗೆ ಆಯಿತಂತೆ. ಬ್ಯಾಗ್ ಇಡುತ್ತಿದ್ದಂತೆ ಪಕ್ಕದಲ್ಲಿಂದ ಧ್ವನಿ ಕೇಳಿ ಬಂತು.ಪುರಿ ಪ್ರತಿಕ್ರಿಯಿಸಿದ. ಯಾವುದು..... ದೇವಸ್ಥಾನದ ಹಂದಿಯಾ?.. ಭಯ ಹಾಗೂ ಕುತೂಹಲ ಮುಖದಲ್ಲಿತ್ತು... ಅಲ್ಲ ಅದಲ್ಲ ....ಯಾವುದೋ ಕಾಡ್ ಹಂದಿ.. ಸಮಾಧಾನವಾಯಿತು.
ನಿಮ್ಮಪ್ಪ ಕರೆಂಟ್ ಬೇಲಿ ಸ್ವಿಚ್ ಹಾಕಿಯೆು ಮಲ್ಕೊಂಡಿದ್ನಂತೆ..ಹಂದಿ ರಾತ್ರಿ ಪಂಜರಗಡ್ಡೆ ಬುಡ ಕೆದರಿ ಕರೆಂಟ್ ಬೇಲಿ ಹಾರಿದೆ..ಶಾಕ್ ಹೊಡೆಸಿಕೊಂಡು ಸತ್ತಿತು... ಹಂದಿಯನ್ನು ನೋಡಿದೆ.ವಿಕಾರವಾಗಿ ಬಾಯಿ ತೆರೆದು ಬಿದ್ದಿತ್ತು. ಕರೆಂಟ್ ಬೇಲಿಯ ಗೂಟಗಳೂ ಹತ್ತಿರ ಬಿದ್ದಿದ್ದವು. ಬೇಲಿಯ ತಂತಿ ಹಂದಿಯ ಕಾಲಿಗೆ ಸುತ್ತಿತ್ತು. ಬಾಯಿಂದ ಬಂದ ರಕ್ತ ಹೆಪ್ಪುಗಟ್ಟಿ ಕರ್ರಗಾಗಿತ್ತು..ನಾನಲ್ಲಿ ಸೈಂಟಿಸ್ಟ್ ತರ ಬಗ್ಗಿ ಬಗ್ಗಿ ನೋಡುತ್ತಿದ್ದೆ.ಉಳಿದವರೆಲ್ಲಾ ನನ್ನನ್ನೇ ನೋಡುತ್ತಿದ್ದಾರೆಂದು ಸುಮ್ಮನಾದೆ.
ಅಲ್ಲ ವೆಂಕಟ್ರಮಣನಿಗೆ ಬುದ್ಧಿ ಬೇಡವಾ..ದೇವಸ್ಥಾನದ ಗಡಿಯವರೆಗೂ ತನ್ನ ಬೇಲಿ ಹಾಕಿದ ..ಈಗ ನೋಡು ಏನಾಯಿತು.. ಹೌದು ಮತ್ತೆ..ದೇವಸ್ಥಾನದ ಜಾಗ ಹೊಡೆಯಲು ನೋಡಿದರೆ ಆಗುವುದೇ ಹೀಗೆ.. ಅಲ್ಲ ಅವನಿಗಾದ್ರೂ ಏನ್ ಗೊತ್ತಿತ್ತು..ಜಾಗ ಅವನದ್ದು ಅಂತ ಬೇಲಿ ಹಾಕಿದ..ಈ ಹಂದಿ ನೋಡಿಕೊಂಡು ಹೋಗಿ ದೇವಸ್ಥಾನದ ಗಡಿಯಲ್ಲೇ ಬೇಲಿ ಹಾರ್ಬೇಕಿತ್ತೇ...? ಅಲ್ಲಿದ್ದ ಜನರಾಡುವ ಮಾತುಗಳನ್ನು ಕೇಳಿ ವಿಚಿತ್ರವೆನಿಸಿತು. ಒಂದು ಮೂಕ ಪ್ರಾಣಿ ಸತ್ತದ್ದಕ್ಕೆ ಈ ರೀತಿಯ ವಿವರಣೆ, ವಿಮರ್ಶೆ ಕೇಳಿ ಬೆಂಗಳೂರಿನ ನೆನೆಪಾಯಿತು. ಅಲ್ಲಿ ಮನುಷ್ಯ ಸತ್ತರೂ ಈ ರೀತಿ ಚರ್ಚೆಯಾಗಲಾರದು.. ಊರಿನ ಜನರ ಮುಗ್ಧತೆಗೆ ವಂದಿಸಿದೆ.
ವೆಂಕಟರಮಣ ಅಂದಾಗ ನೆನಪಾಯಿತು.ಅವರು ಪುರಿಯ ತಂದೆ ಎಂದು. ಕ್ಲಾಸಿನಲ್ಲಿ ಒಮ್ಮೆ ನಮ್ಮ ಪುರಿಯ ಹಾಜರಾತಿ ಕರೆವಾಗ ನಮ್ಮ ಸೈಯನ್ಸ್ ಟೀಚರ್ ಒಬ್ಬರು 'ಪುರುಷೋತ್ತಮ್ ವೆಂಕಟಮರಣ ಭಾಗವತ್' ಅಂತ ಕರೆದದ್ದು ಇನ್ನೂ ನೆನಪಿದೆ. 'ರಮಣನಾಗುವುದೆಂದರೆ ಮರಣವೇ' ಎರಡೂ ಸಮನಾರ್ಥಕ ಪದಗಳಿದ್ದಂತೆ ಎಂದು ಗೆಳೆಯರ ಬಳಿ ನನ್ನ ಪದಸಂಪತ್ತಿನ ಕೌಶಲ್ಯವನ್ನು ಮೆರೆದಿದ್ದೆ.....ಗುಂಪಿನಲ್ಲಿ ಮುದಿ ಹೆಣ್ಣು ದನಿಯೊಂದು ಪಕ್ಕದಲ್ಲಿದ್ದ ಇನ್ನೊಬ್ಬಳ ಕಿವಿಯಲ್ಲಿ ಉಸುರಿದ್ದು ಎಲ್ಲರಿಗೂ ಕೇಳಿತು.. ಹಂದಿ ದೇವಸ್ಥಾನದ ಜಾಗದಲ್ಲಿ ಬಂದು ಸತ್ತಿರುವುದನ್ನು ನೋಡಿದರೆ ದೇವರ ಅಂಶವೇ ಇರಬೇಕು..ದೇವ್ರೇ ಊರಿಗೇನೂ ಆಗ್ದೇ ಇರ್ಲಪ್ಪಾ.
ಚಿಕ್ಕಪ್ಪ .. ಅಪ್ಪ ಎಲ್ಲಿ? ... ನಂಗೂ ಗೊತ್ತಿಲ್ಲ ನಿನ್ನೆ ರಾತ್ರಿ ಆಟ ಇತ್ತು..ಈಗ್ ಬಂದೇ ಇನ್ನೂ ಮನೆಗೂ ಹೋಗಿಲ್ಲ..ಅಣ್ಣ ಪಂಚಾಂಗ ತರಲು ಜೋಯಿಸರ ಜೋಡಿ ಮನೆಗೆ ಹೋಗಿರಬೇಕು..ಯಾರೋ ಅಂದ್ರು. ಆಗ ಗೊತ್ತಾಯಿತು ಇಷ್ಟೊತ್ತು ಪುರಿಯ ಜೊತೆ ಮಾತಾಡಿದ್ದು ಅವನ ಚಿಕ್ಕಪ್ಪ ಎಂದು.
ನೋಡಿದರೆ ಅವನ ಚಿಕ್ಕಪ್ಪ ಎಂದ ಹೇಳಲು ಸಾಧ್ಯವೇ ಇಲ್ಲ.ಪುರಿ ಚಿಕ್ಕಪ್ಪನ ಬಗ್ಗೆ ಮೊದಲೇ ಹೇಳಿದ್ದ.ಅವನ ಅಪ್ಪನಿಗಿಂತಲೂ ಹೆಚ್ಚಾಗಿ..ಅವನ ಚಿಕ್ಕಪ್ಪ ಯಕ್ಷಗಾನ ಕಲಾವಿದರು..ಶ್ರೀಧರ ಭಾಗವತ್ ಅಂತ ಅವರ ಹೆಸರು..ಆಟ ಆಟ ಅಂತ ತಿರುಗುತ್ತಲೇ ಇರ್ತಾರೆ..ಮನೆಯಲ್ಲಿರೋದೇ ಕಡಿಮೆ..ಇನ್ನೊಮ್ಮೆ ಅವರನ್ನು ಗಮನಿಸಿದೆ. ದಪ್ಪ ಮುಖ, ಎಣ್ಣೆಗಪ್ಪು ಬಣ್ಣ, ಪೂರ್ತಿ ಹಿಂದೆ ಬಾಚಿದ ಕಪ್ಪು ಕೂದಲು..ಅಲ್ಲಲ್ಲಿ ಬೆಳ್ಳಿ ರೇಖೆಗಳನ್ನು ಗಮನಿಸದೇ ಇದ್ದರೆ ಯುವಕರೆಂದೇ ಹೇಳಬಹುದು..ಮೀಸೆ ತೆಗೆದು ಹುಬ್ಬುಗಳನ್ನು ತೀಡಿದ ರೀತಿ ನೋಡಿ ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳನ್ನೂ ಗಂಡಸರೇ ಮಾಡುತ್ತರೆಂಬುದಕ್ಕೆ ಸಮರ್ಥನೆ ಸಿಕ್ಕಂತಾಯಿತು. 'ಶ್ರೀಧರ ಭಾಗವತರ ಹೆಣ್ಣು ವೇಷ' ಎಂದು ಕರಪತ್ರಗಳಲ್ಲಿ ಮುದ್ರಿಸುವಷ್ಟು ಪ್ರಸಿದ್ಧಿ ನಮ್ಮ ಚಿಕ್ಕಪ್ಪ ಎಂದು ಪುರಿ ಹೇಳುತ್ತಿದ್ದ. ಕಿವಿಯ ಹತ್ತಿರ ರಾತ್ರಿ ಹಚ್ಚಿದ ಬಣ್ಣ ಹಾಗೇ ಉಳಿದಿತ್ತು. ಹಂದಿ ಸತ್ತ ವಿಷಯ ಕೇಳಿ ಚೌಕಿ ಮನೆಯಿಂದ ವೇಷ ಕಳಚಿ ಬಣ್ಣ ಒರೆಸಿಕೊಂಡು ಓಡಿ ಬಂದಿರುವುದನ್ನು ಅವರೇ ಹೇಳಿದರು.
ಅವರ ಹೆಂಡತಿಗಾಗಿ ಕಣ್ಣು ಹುಡುಕ ತೊಡಗಿತು. ಎಲ್ಲಿ ಆ ಹೆಂಗಸು. ಪುರಿಯೋ ಆಕೆಯನ್ನು ಸಾಕ್ಷಾತ್ ತಾಟಕಿಯಂತೆ ಬಿಂಬಿಸಿದ್ದ. ಆಕೆಯ ಸಲುವಾಗಿಯೆು ಮನೆ ಒಡೆದದ್ದು..ಈಗ ಚಿಕ್ಕಪ್ಪ ಬೇರೆ ವಾಸವಾಗಿರುವುದು ಎಂಬುದಾಗಿ ಆಕೆಯ ಗುಣಗಾನ ಮಾಡಿದ್ದ..ಅವಳೇ ಇರಬೇಕು..ಚಿಕ್ಕಪ್ಪನ ಪಕ್ಕದಲ್ಲೇ ನಿಂತಿದ್ದಾಳೆ..ಸಿಡುಕು ಮೂತಿ..ಕೋರೆ ಹಲ್ಲು ಉದ್ದವಿದ್ದರೆ ತಾಟಕಿ ಎನ್ನಬಹುದೇನೋ..ಹೇಗೆ ಶ್ರೀಧರ ಭಾಗವತರಿಗೆ ಗಂಟು ಬಿದ್ದಳು ಎಂದು ಕೇಳಬೇಕೆನಿಸಿತು..ಬೇರೆಯವರ ವಿಚಾರ ನಮಗ್ಯಾಕೆ ಎಂದು ಸುಮ್ಮನಾದೆ...ಅವರ ಮಗನೇ ಇರಬೇಕು..ಅಮ್ಮನ ಕೈಯಿಂದ ಕೊಸರಿಕೊಂಡು ಹಂದಿ ನೋಡಲು ಧಾವಿಸಿದ್ದ... ಮರೀ ನಿನ್ನ ಹೆಸರೇನೋ.? ಮಗುವನ್ನು ಕೇಳಿದೆ. ಬಾಲಚಂದ್ರ.. ಅವನಮ್ಮ ಉತ್ತರಿಸಿದಳು.. ಬಾರೋ... ಅಧಿಕಪ್ರಸಂಗಿ.. ಅವನನ್ನು ಎಳೆದುಕೊಂಡು ಹೋದಳು. ನಾನು ಸುಮ್ಮನಾದೆ..ಅಧಿಕ ಪ್ರಸಂಗ ಮಾಡಿದ್ದು ನಾನಾಗಿತ್ತು.
ಅಪ್ಪಾ... ಪುರಿ ಹೋಗಿ ಅವರ ಕಾಲಿಗೆ ಬಿದ್ದ.ನಾನೂ ಅನುಕರಿಸಿದೆ. ನನಗರ್ಥವಾಯಿತು. ವೆಂಕಟರಮಣ ಭಾಗವತರು ಇವರೇ.. ನೋಡಲು ಪುರಿಯಂತೆ ಇದ್ದರು.ಆಜಾನು ಬಾಹು. ಲುಂಗಿ ಉಟ್ಟಿದ್ದರು. ಮೇಲೆ ಒಂದು ಟವೆಲ್..ಕೆಂಪು ಬಣ್ಣದ್ದು.ಮೀಸೆ ದಪ್ಪನಾಗಿಯೆು ಇತ್ತು.ಯಾರಾದರೂ ಹೇಳಬಹುದು ವಯಸ್ಸು ಐವತ್ತು ದಾಟಿದೆ ಎಂದು. ನಾನು ಅವರನ್ನು ನೋಡಿ ಉಪಚಾರದ ನಗೆ ನಕ್ಕೆ.ಅವರು ನಗಲಿಲ್ಲ.ನನ್ನನ್ನು ಗಮನಿಸಲೂ ಇಲ್ಲ.ಪುರಿ ಮಾತ್ರ ತಪ್ಪಿಸ್ಥತನಂತೆ ಪಶ್ಚಾತ್ತಾಪದ ನಗೆ ಬೀರಿದ. ನಾನಂದುಕೊಂಡೆ ವಿಷಯ ಗಂಭೀರವಾಗಿದೆ.
ಗುಂಪು ಸರಿದು ದಾರಿ ಮಾಡಿಕೊಡುತ್ತಿದ್ದಂತೆ ದೇವಸ್ಥಾನದ ಉಗ್ರಾಣಿಯೂ ಜೋಯಿಸರೂ ದಡ ದಡನೆ ಬಂದು ದೇವಸ್ಥಾನದ ಒಳ ನಡೆದರು. ಜೋಯಿಸರ ಕೈಲಿದ್ದ ಪಂಚಾಂಗ ಹರಿದು ಹಾಳೆಗಳೆಲ್ಲಾ ಹೊರಬಂದಿದ್ದವು.ಅಲ್ಲೇ ಕಟ್ಟೆಯ ಮೇಲೆ ಕುಳಿತು ಪಂಚಾಂಗ ತಿರುಗಿಸಿ ತಿರುಗಿಸಿ ಏನೇನೋ ಲೆಕ್ಕಾಚಾರ ಮಾಡಹತ್ತಿದರು. ಪುರಿ ಅಪ್ಪನನ್ನು ಕೇಳಿದ ಏನಾಯ್ತು....? ಇನ್ನೇನು ಸುಡುಗಾಡು... ಹಂದಿ ನಮ್ಮನೆ ಬೇಲಿ ತಾಗಿ ಸತ್ತಿದೆಯಂತೆ ..ಎಲ್ಲರೂ ನೋಡಿದವರ ಹಾಗೆ ಮಾತಾಡ್ತಾರೆ.. ನಾವು ಶಾಂತಿ ಮಾಡಿಸಬೇಕಂತೆ... ನನಗರ್ಥವಾಗಲಿಲ್ಲ. ಹಿಂದಿನಿಂದ ಇನ್ನೊಂದು ಧ್ವನಿ ಬಂತು. ಮತ್ತೆ.. ನಮ್ಮನೆ ತೋಟದಲ್ಲಾಗಿದ್ರೆ ನಾವು ಮಾಡಿಸುತ್ತಿರಲಿಲ್ಲವೇನು?.. ನಿನ್ನೆ ನಮ್ಮನೆ ಬೇಲಿ ಸ್ವಿಚ್ಚೇ ಹಾಕಿರಲಿಲ್ಲ. ಅವರು ಆಟಕ್ಕೆ ಹೋಗಿದ್ರು..ನನಗೆ ಮರ್ತೆ ಹೋಯ್ತು..ಈಗ ನೋಡಿದ್ರೆ ಮರೆತು ಹೋಗಿದ್ದು ಒಳ್ಳೇದಾಯಿತು ..ಇಲ್ದೇ ಇದ್ರೆ ಹಂದಿ ಯಾರ ಮನೆ ಬೇಲಿ ತಾಗಿ ಸತ್ತಿತು ಅಂತ ಗೊತ್ತೇ ಆಗ್ತಿರ್ಲಿಲ್ಲ... ಅದೇ ಹೆಂಗಸು ಮಾತಾಡಿದ್ದು.
ಆ ಮಾತುಗಳು ಸ್ವಗತವಾಗಿದ್ದರೂ ಅದು ವೆಂಕಟ್ರಮಣ ಭಾಗವತರಿಗೆ ಹೇಳಿದ್ದು ಬಿಂಬಿತವಾಗಿತ್ತು.ಅವಳ ಧ್ವನಿಯಲ್ಲಿ ತಪ್ಪು ಮಾಡಿದವರು ನೀವೇ ಈಗ ಅನುಭವಿಸಿ ಎಂಬ ಧೋರಣೆ ಇತ್ತು. ಜೊತೆಗೆ ನಾವು ತಪ್ಪಿಸ್ಥತರಲ್ಲ..ಎಂಬ ವಿಜಯದ ಛಾಯೆುಯೂ..
ಭಾಗವತರು ಮಾತಾಡಲಿಲ್ಲ.
ಜೋಯಿಸರು ಕಟ್ಟೆಯ ಮೇಲಿಂದ ಇಳಿದರು.ಬಾಯಲ್ಲಿದ್ದ ವೀಳ್ಯವನ್ನು ಅಲ್ಲೇ ಪುಚಕ್ಕನೆ ಉಗುಳಿದರು..ತಮ್ಮ ಕೆಂಪು ಕೆಂಪಾದ ಹಲ್ಲುಗಳನ್ನು ತೋರಿಸುತ್ತಾ ಮುಂದಿನ ಸೋಮವಾರ ಒಳ್ಳೇ ದಿನ.. ದೇವಸ್ಥಾನದಲ್ಲೇ ವರಾಹ ಶಾಂತಿ ಮಾಡಿಸಿಬಿಡೋಣ..ಯಾಕೇಂದ್ರೆ ಮಂಗಳವಾರ ನನಗೆ ವಿಶ್ವನಾಥನ ಮನೆಯ ತಿಥಿಗೆ ಹೋಗಬೇಕು..ಬೇರೆ ಯಾರೂ ಸಿಕ್ತಾ ಇಲ್ಲಾ..ನೀವೇ ಬರಬೇಕು ಅಂತ ವಿಶ್ವನಾಥ ಫೋನ್ ಮಾಡಿದ್ದಾ..ಹ್ಹಿ..ಹ್ಹಿ.. ಅಂದರು. ಮಂಗಳವಾರ ತಿಥಿಗೆ ಹೋಗಬೇಕೆಂದೇ ಸೋಮವಾರ ಒಳ್ಳೆಯ ದಿನವೇ ..ಎಂದು ಕೇಳಬೇಕೆಂದುಕೊಂಡೆ.. ಭಾಗವತರು ಹೂಂ.. ಸರಿ ಮಾಡಲೇಬೇಕು ಅಂತಂದ್ರೆ ಮಾಡೋದೇ..ಇನ್ನೇನ್ ಮಾಡೋಕಾಗತ್ತೆ..ಏನೇನ್ ಸಾಮಾನು ಬೇಕು ಹೇಳಿ..ಪಟ್ಟಿ ಕೊಡಿ..ತರೋಣ.. ಹೇಳಿ ಹೊರಟರು.
ಬ್ಯಾಗ್ ಎತ್ಕೋ..ಹೊರಡೋಣ.. ಅಪ್ಪನ ಕಡೆ ತಿರುಗಿ ನೋಡುತ್ತಾ ಪುರುಷೋತ್ತಮ ನನಗಂದ.ಅವನಪ್ಪ ಬಿರಬಿರನೆ ನಡೆಯುತ್ತಿದ್ದರು.ಅವರಿವರ ಮುಖ ನೋಡಿ ಎನೇನೋ ಅರ್ಥೈಸಿಕೊಳ್ಳುತ್ತಿದ್ದ ನನಗೆ ಬ್ಯಾಗ್ ಎಲ್ಲಿಟ್ಟೆ ಎಂದು ಮರೆತೇ ಹೋಗಿತ್ತು..ದೇವಸ್ಥಾನದ ಕಟ್ಟೆ ಮೇಲಿದ್ದ ಬ್ಯಾಗ್ ತನಗೇನೂ ಸಂಬಂಧವಿಲ್ಲದವರಂತೆ ನಿದ್ರಿಸುತ್ತಿತ್ತು. ಬ್ಯಾಗ್ ಹಿಡಿದು ಪುರಿಯ ಬೆನ್ನು ಹತ್ತಿದೆ. ನನಗರ್ಥವಾಗದ ಕೆಲ ವಿಷಯಗಳ ಮಾಹಿತಿ ನೀಡುವ ಮುಖ ಮಾಡಿದ ಪುರಿ...
ನಮ್ಮನೆ ತೋಟ ಇರೋದು ದೇವಸ್ಥಾನದ ಅಂಚಿಗೆ..ದಿನಾ ದನಗಳ, ಹಂದಿಗಳ ಕಾಟ ತಡೆಯಲಾರದೆ ಇತ್ತೀಚಿಗೆ ಅಪ್ಪ ಕರೆಂಟ್ ಬೇಲಿ ಹಾಕಿದ್ದರು..ಈ ಕರೆಂಟ್ ಬೇಲಿ ಮುಟ್ಟಿ ಯಾರೂ ಸಾಯುವುದಿಲ್ಲ..ಹೆದರಬೇಡಿ...ಅಂತ ಆ ಎಲೆಕ್ಟಿಶಿಯನ್ ಪಾಂಡು ಹೇಳಿದ್ದ..ಈ ಹಂದಿ ಹೇಗೆ ಸತ್ತಿತೋ ಏನೋ... ದೇವಸ್ಥಾನ ತೋಟದ ಪಕ್ಕದಲ್ಲಿದ್ದದ್ದು ದೇವರ ತಪ್ಪು..ಕರೆಂಟ್ ಬೇಲಿ ಮುಟ್ಟಿದ್ದು ಹಂದಿ ತಪ್ಪು ..ನಾವೇನೂ ಮಾಡ್ಲಿಲ್ಲ..ಎಂಬ ಭಾವ ಅದರಲ್ಲಿತ್ತು. ವೆಂಕಟ್ರಮಣ ಭಾಗವತರೋ ಸುಮ್ಮನೆ ನಡೆಯುತ್ತಿದ್ದರು. ಸೌಜನ್ಯಕ್ಕೂ ಒಮ್ಮೆಯೂ ಮಾತಾಡಲಿಲ್ಲ..ಪುರಿ ಮೊದಲೇ ಹೇಳಿದ್ದ..ಅಪ್ಪ ಜಾಸ್ತಿ ಮಾತಾಡಲ್ಲ ಅಂತ..
ಈ ದರಿದ್ರ ಹಂದಿಗೆ ಬೇರೆ ಜಾಗ ಸಿಗಲಿಲ್ಲವೇ..ಸಾಯಲಿಕ್ಕೆ...ಬಂದು ಬಂದು ನಮ್ಮನೆ ತೋಟದಲ್ಲೇ ಬೀಳಬೇಕೆ..ಅದೂ ದೇವಸ್ಥಾನದ ಬದಿ ಅಂಚಿಗೆ..ಎಲ್ಲಾ ನನ್ನ ಪ್ರಾರಬ್ಧ... ಯಾರ್ಯಾರಿಂದಲೋ ಎನೇನೋ ಕೇಳ್ಬೇಕಾಯ್ತು... ಸುಮ್ಮನೆ ಗೊಣಗಿದರು ಭಾಗವತರು. ಯಾರ್ಯಾರೋ ಎಂಬುದು ತನ್ನ ತಮ್ಮನ ಹೆಂಡತಿಗೆ ಎನ್ನುವುದು ತಿಳಿಯಿತು.. ಒಂದು ಮೂಕ ಪ್ರಾಣಿ ಸತ್ತಾಗ ತಮ್ಮ ಗೆಣಸು ಬೇಯಿಸುವ ಜೋಯಿಸರಂತ ಜನ ಒಂದು ಕಡೆ...ತಮ್ಮ ವೈರತ್ವವನ್ನು ಸಾಧಿಸುವ ಚಿಕ್ಕಮ್ಮನಂತವರು ಇನ್ನೂಂದೆಡೆ... ಏನೂ ಮಾಡಲಿಕ್ಕಾಗದೆ ಗೊಣಗುವ ಪುರಿ,ಭಾಗವತರಂತವರು ಮತ್ತೊಂದು ಕಡೆ..ಇವುಗಳ ನಡುವೆ ಸುಮ್ಮನೆ ಕುಳಿತಿದ್ದ ಬ್ಯಾಗೇ ತೂಕವಾಗಿ ಕಂಡಿತು.
ಇವನು ನನ್ನ ಫ್ರೆಂಡ್.. ಹೇಳಿದ್ನಲ್ಲಾ.. ಪುರಿ ಪರಿಚಯ ಭಾಷಣ ಮಾಡಿದ ದಾರಿಯಲ್ಲೇ.. ನಮಸ್ಕಾರ ಅಂಕಲ್.. ಕೈ ಮುಗಿದೆ. ಅವರು ಈ ಸಾರಿ ನಕ್ಕರು.. ಹಿನ್ನೆಲೆಯಲ್ಲಿ ಬೇಸರ ಇಣುಕಿದ್ದನ್ನು ನಾನು ನೋಡಿದೆ..
0 comments:
Post a Comment