ದಾರಿಯುದ್ದಕ್ಕೂ ಮೌನ ಆವರಿಸಿತ್ತು..ಸುತ್ತಲಿನ ಪ್ರಕೃತಿ ಮೆಲ್ಲಗೆ ಮಾತಾಡುತ್ತಿತ್ತು... ಮನೆ ಅಷ್ಟೇನೂ ದೂರವಿರಲಿಲ್ಲ.ಆದರೆ ಭಾರವಾಗಿದ್ದ ಬ್ಯಾಗಿನಿಂದಾಗಿ ಹಾಗೂ ಮೌನದಿಂದಾಗಿ ದೂರವೆನಿಸಿತ್ತುನನಗೆ ಈ ರೀತಿ ಮೌನ ಸರಿಬೀಳುವುದಿಲ್ಲ...ನಾನು ಎಷ್ಟೋ ಬಾರಿ ಪ್ರಯತ್ನಿಸಿದ್ದೇನೆ ಮೌನವಾಗಿರಲು..ಹೆಚ್ಚೆಂದರೆ ಹತ್ತು ನಿಮಿಷ...ಅದಕ್ಕೂ ಹೆಚ್ಚು ಒಬ್ಬಂಟಿಯಾಗಿದ್ದರೂ ಬಾಯಿಂದ ಹಾಡೋ ಕವನವೋ ಹೊರಬರುವುದಂತೂ ಗ್ಯಾರಂಟಿ..ಆದ್ರೆ ಈ ಪುರಿ ಹಾಗೂ ಅವನಪ್ಪ ಸುಮ್ಮನೆ ಇದೇ ಮೊದಲ ಬಾರಿಗೆ ನೋಡಿದವರಂತೆ ದಾರಿ ನೋಡುತ್ತಾ ಹೋಗುತ್ತಿದ್ದಾರೆ...
ಅಂತೂ ಮನೆ ಬಂತು...ಮನೆ ದೊಡ್ಡದೇ...ಸುತ್ತಲಿನ ಹಸಿರು ಪರಿಸರದಲ್ಲಿ ಕೆಂಪನೆ ಹಂಚಿನ ಮನೆ ಕಣ್ಣಿಗೆ ಮುದ ನೀಡುತ್ತಿತ್ತು.ನಮ್ಮ ಸಿಟಿಗಳಲ್ಲಾದರೆ ಕಾಂಪೌಂಡ್ ಕಟ್ಟಿ ಮನೆಯನ್ನೂ ಮನಸನ್ನೂ ಸೀಮಿತಗೊಳಿಸಿಕೊಂಡುಬಿಡುತ್ತೇವೆ...ಆದರೆ ಪುರಿಯ ಮನೆ ಹಾಗಲ್ಲ....ನನಗದು ವಿಶಾಲತೆಯ ಸಂಕೇತವೆನಿಸಿತು..ಎರಡಂತಸ್ತಿನ ಭರ್ಜರಿ ಮನೆ....ದೊಡ್ಡ ಅಂಗಳ...ಇಡೀ ಅಂಗಳಕ್ಕೆ ಅಡಿಕೆ ಮರದ ದಬ್ಬೆಗಳಿಂದ ಮಾಡಿದ ಚಪ್ಪರ...ನನಗೂ ಗೊತ್ತಿರಲಿಲ್ಲ..ನಮ್ಮೂರಿನಲ್ಲಿ ಹಾಕುವ ಪೆಂಡಾಲ್ಗಳ ಪರಿಚಯವಿದೆ..ಆದರೆ ಇದೇನಿದು...ಮನೆಯ ಅಂಗಲಕ್ಕೆ ಕಾಲಿರಿಸುವ ಮುಂಚೆಯೆು ಪುರಿಯನ್ನು ಕೇಳಿದೆ...ಏನೋ ಇದು...ಪರಿಸರವಾದಿಗಳು ವಿಚಿತ್ರ ಪೆಂಡಾಲ್ ವ್ಯವಸ್ಥೆ ಮಾಡಿದ್ದಾರೆ..ನಮ್ಮ ಸ್ವಾಗತಕ್ಕೆ... ಲೇ ಇದು ಪೆಂಡಾಲ್ ಅಲ್ವೋ..ಅಡಿಕೆ ಒಣಗಿಸಲು ಮಾಡಿದ ಅಟ್ಟಣಿಗೆ... ಹತ್ತಿರ ಬರುತ್ತಿದ್ದಂತೆ ಸ್ಪಷ್ಟವಾಯಿತು..ಅಡಿಕೆ ಮರವನ್ನು ಸೀಳಿ ಚಪ್ಪರದಂತೆ ಹಾಸಿದ್ದರು...ಅದಕ್ಕೆ ಕಂಬವೂ ಅಡಿಕೆಮರದ್ದೇ...ಏನಿದು ಜನ ಪಾಪದ ಅಡಿಕೆಮರವನ್ನು ಈ ರೀತಿ ದುಡಿಸಿಕೊಳ್ಳುತ್ತಿದ್ದಾರೆ ಅನ್ನಿಸಿತು.
ನಾನು ಮನೆಗೆ ಹೊಸಬನಾಗಿದ್ದರಿಂದ ಎಲ್ಲರಿಗಿಂತ ಹಿಂದಿದ್ದೆವೆಂಕಟರಮಣ ಭಾಗವತರು ದಡ ದಡನೆ ನಡೆದು ಬಂದು ಒಳ ಪ್ರವೇಶಿಸಿದರು...ಪುರಿ ನನ್ನ ಕಷ್ಟನೋಡುತ್ತಾ ಬಾಗಿಲ ಬಳಿ ನಿಂತಿದ್ದ. ಶೂ ಕಳಚಿಟ್ಟು ಕಲ್ತೊಳೆಯುವ ನೀರಿಗಾಗಿ ಅರಸಿದೆ...ಪುರಿ ಅಂಗಳದ ಆ ತುದಿಯಲ್ಲಿದ್ದ ಡ್ರಮ್ ಒಂದನ್ನು ತೋರಿಸಿದ...ಶೂ ಹಾಕಿದ್ದರಿಂದ ಕಾಲೇನೂ ಕೊಳೆಯಾಗಿರಲಿಲ್ಲ..ಶಾಸ್ತ್ರಕ್ಕೆಂದು ನೀರು ಹಾಕಿಕೊಂಡು ಒಳ ಹೊಕ್ಕೆ...
ಬಂದು ಎರಡು ನಿಮಿಷವಾದರೂ ಯಾರೂ ಕಾಣಿಸಲಿಲ್ಲ...ಭಾಗವತರು ಒಳಗಡೆ ಯಾವುದೋ ಹಳೇ ಡೈರಿ ಹಿಡಿದುಕೊಂಡು ಏನೋ ಹುಡುಕುತ್ತಿದ್ದರು..ಪುರಿಯನ್ನು ಕೇಳಿದೆ ... ಅಜ್ಜಿ ಎಲ್ಲೋ..? ಪುರಿಯ ಅಮ್ಮನಿಲ್ಲದ ವಿಚಾರ ಗೊತ್ತಿತ್ತು. ಪುರಿಗೆ ಅವನಮ್ಮನನ್ನು ನೋಡಿದ ನೆನಪೂ ಇರಲಿಲ್ಲ. ಇಲ್ಲೇ ಎಲ್ಲೋ ಇರಬೇಕೋ...ನೋಡುತ್ತೇನೆ ತಡಿ... ಅಮ್ಮಮ್ಮಾ... ಕರೆಯುತ್ತಾ ಎದ್ದು ಒಳಮನೆಗೆ ನಡೆದ....ನಾನಿಲ್ಲಿ ಒಬ್ಬಂಟಿ..ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದೆ.. ಹಳೇ ಮನೆ..ಆದರೂ ಅಷ್ಟೋಂದು ಹಳೆಯದಲ್ಲ..ಗೋಡೆಯ ಮಸುಕು ಬಿಳಿ ಬಣ್ಣ ಸುಮಾರು ಮೂರು ವರ್ಷದಷ್ಟು ಹಳೆಯದಿರಬಹುದು....ಗೋಡೆಯ ಆ ಮೂಲೆಯಲ್ಲಿ ಉದ್ದದ ಕೊಂಬಿರುವ ಕಡವೆಯ ಮುಖ..ಅದಕ್ಕೆ ತೂಗುಹಾಕಿರುವ ಒಂದು ಶರ್ಟ್ ಮತ್ತು ಒಂದು ಕೈಚೀಲ...ಪಕ್ಕದಲ್ಲೇ ಹಾರ ಹಾಕಿದ ಪುರಿಯ ಅಮ್ಮನ ಫೋಟೋ...ನನ್ನ ಕಣ್ಣು ಮನೆಯನ್ನೆಲ್ಲಾ ಪರೀಕ್ಷಿಸಿತು.
ಭಾಗವತರು ಹೊರಬಂದರು..ಡೈರಿ ಸಮೇತ.. ಎದ್ದು ನಿಲ್ಲಬೇಕೋ ಕುಳಿತೇ ಇರಬೇಕೋ ಎಂಬ ಗೊಂದಲದಲ್ಲಿರುವಾಗಲೇ ಹೊರ ನಡೆದರು...ನನೊಬ್ಬ ಇದ್ದುದನ್ನು ಗಮನಿಸದೇ...ಹಂದಿಯ ವಿಚಾರ ಇನ್ನೂ ಮುಗಿದಿಲ್ಲ ಅಂದುಕೊಂಡೆ...ಅಷ್ಟರಲ್ಲೇ ಅಜ್ಜಿ ಮೊಮ್ಮಗ ಹೊರಬಂದರು... ಅಮ್ಮಮ್ಮ ಇಂವ ನನ್ನ ಫ್ರೆಂಡ್.. ಪುರಿಯಿಂದ ನನ್ನ ಪರಿಚಯ..ನಾನು ಹೋಗಿ ಕಾಲಿಗೆ ಬಿದ್ದೆ....ಅಮ್ಮಮ್ಮ ನಾನಂದುಕೊಂಡಷ್ಟು ಮುದುಕಿಯಲ್ಲ...ತಲೆಗೂದಲೆಲ್ಲಾ ಹಣ್ಣಾಗಿದ್ದವು...ಚರ್ಮ ಅಲ್ಲಲ್ಲಿ ಸುಕ್ಕುಗಟ್ಟಿತ್ತು..ಆದರೆ ಕಣ್ಣುಗಳಲ್ಲಿನ ಚೈತನ್ಯ ಕುಂದಿರಲಿಲ್ಲ... ಯಾವ ಜಾತಿ?... ಕೇಳಿಯೆು ಬಿಟ್ಟರು...ಪುರಿ ಮೊದಲೇ ಹೇಳಿದ್ದ ..ಈ ಪ್ರಶ್ನೆ ಕೇಳಿಯೆು ಕೇಳುತ್ತಾರೆಂದು... ನಮ್ದೇ. ಅಮ್ಮಮ್ಮ.. ಪುರಿ ಉತ್ತರಿಸಿದ.
ಅದು ಸಹಜ. ಅದಕ್ಕೇ ಜನರೇಷನ್ ಗ್ಯಾಪ್ ಅನ್ನೋದು...ನನಗೇನೂ ಬೇಸರವಾಗಲಿಲ್ಲ..ತಾವು ಜೀವನದುದ್ದಕ್ಕೂ ಕಾಪಾಡಿಕೊಂಡು ಬಂದಂತ ಮಡಿ-ಮೈಲಿಗೆಯನ್ನು ತನ್ನ ಕುಟುಂಬದ ಮರಿಯೊಂದು ನಾಶಮಾಡುವುದು ಯಾರಿಗೂ ಇಷ್ಟವಾಗಲ್ಲ.ಅವರ ಸಮಾಧಾನಕ್ಕೆ ನಾವು ಹೊಂದಿಕೊಂಡು ಹೋದರೆ ನಮಗೂ ನಷ್ಟವೇನಿಲ್ಲ....ತತ್ತ್ವಜ್ಞಾನಿಯಂತೆ ಯೋಚಿಸತೊಡಗಿದೆ...ನನ್ನ ಮನಸ್ಸಿನಲ್ಲಿರುವ ಎಲ್ಲಾ ಯೋಚನೆಗಳೂ ಬೇರೆ ಯಾರಿಗಾದರೂ ಗೊತ್ತಾಗುವಂತಿದ್ದರೆ ಅವರು ನನಗೆ ಮಾಸ್ಟರ್ ಆಫ್ ಫಿಲಾಸಫಿ ಕೊಡಿಸುತ್ತಿದ್ದರು...ಇರಲಿ ಅಂತ ಭಾಗ್ಯ ನನಗಿಲ್ಲ...
ನಾನೂ ಅಜ್ಜಿಯನ್ನು ಪುರಿಯಂತೆ ಅಮ್ಮಮ್ಮ ಎಂದು ಕರೆಯಲು ನಿರ್ಧರಿಸಿದೆ.. ಒಲೆ ಮೇಲೆ ನೀರಿಟ್ಟು ಬರ್ತೇನೆ..ಅವಲಕ್ಕಿ ಕಲ್ಸಾಗಿದೆ..ವೆಂಟ್ರಣ ಬರ್ಲಿ ಎಲ್ಲರೂ ಚಾ ಕುಡ್ಯೋಣ ಅನ್ನುತ್ತಾ ಅಜ್ಜಿ ಅಲ್ಲ ಅಮ್ಮಮ್ಮ ಒಳಗೆ ಹೋದರು...ಹೌದು ಈ ಭಾಗವತರು ಎಲ್ಲಿಗೆ ಹೋದರು...ಆಲೋಚನೆಗೆ ದಾರಿಮಾಡಿಕೊಡದೆ ಪುರಿಯೆು ಹೇಳಿದ... ಅಪ್ಪ ಇಲ್ಲೇ ಫೋನ್ ಮಾಡಿ ಬರಲು ಹೋಗಿದ್ದಾರೆ..ಆ ಪಾಂಡುಗೆ..ಎಲ್ಲಾ ಆ ಹಂದಿಯಿಂದ ಇದೇನಿದು ..ಈ ಪುರಿ ನನಗೆ ಎಲ್ಲಾ ಗೊತ್ತಿರುವಂತೆ ಹೇಳ್ತಾ ಇದ್ದಾನಲ್ಲಾ..ನನಗೇನು ಗೊತ್ತಿರಬೇಕು ..ಯಾವ ಪಾಂಡುನೋ ಎನೋ..ಈ ಹಂದಿ ನಿಜವಾಗಲೂ ಅಪ್ಪ ಮಗನ ತಲೆ ಕೆಡಿಸಿದೆ ಅಂದುಕೊಂಡೆ..
ಗಂಟೆ ಎಂಟೂವರೆ. ವೆಂಕಟರಮಣ ಭಾಗವತರ ಪತ್ತೆ ಇಲ್ಲ.ಪುರಿಯನ್ನು ಕೇಳಿದೆ.. ಎಲ್ಲೋ ನಿಮ್ಮಪ್ಪ..ಏನ್ ಫೋನ್ ಮಾಡಕ್ಕೋಗಿದಾರೋ ಇಲ್ಲಾ... ಇಲ್ಲೇ ಪಕ್ಕದಲ್ಲಿ ದೇವಸ್ಥಾನದ ಜೋಯಿಸರ ಮನೆಯಲ್ಲಿ ಫೋನಿದೆ...ಇನ್ನೇನ್ ಬಂದ್ಬಿಡ್ತಾನೆ.. ಅಡುಗೆ ಮನೆಯಿಂದಲೇ ಅಮ್ಮಮ್ಮ ಹೇಳಿದ್ದು. ಅಷ್ಟರಲ್ಲೇ ಭಾಗವತರ ಆಗಮನ. ಆದರೆ ಈಗ ನಡಿಗೆ ನಿಧಾನವಾಗಿತ್ತು..ಅಷ್ಟೊಂದು ಬಿರುಸಿರಲಿಲ್ಲ..ಒಳಗೆ ಬಂದವರೇ ಫ್ಯಾನ್ ಸ್ವಿಚ್ ಅದುಮಿದರು... ತಥ್..ಹಾಳಾದ ಕರೆಂಟು... ಕರ್ನಾಟಕಕ್ಕೆ ಕರೆಂಟ್ ಕೊಡುವ ಜೋಗ್ ಜಲಪಾತಕ್ಕೆ ಕಾರಣವಾದ ಶರಾವತಿ ನಾಡಿನಲ್ಲಿ ಕರೆಂಟ್ ಇಲ್ಲ. ಯಾವೂರು...? ನನಗೆ ಮೊದಲ ಪ್ರಶ್ನೆ.
ಬೆಂಗಳೂರು ಅಂಕಲ್... ನಿಮ್ಮ ಮಗನ ಕ್ಲಾಸ್ಮೇಟ್..
ನಿಮ್ಮಪ್ಪಾಮ್ಮ..
ಅವರೂ ಬೆಂಗಳೂರೇ.. ಆದರೆ ಅವರ ಪ್ರಷ್ನೆ ಅದಲ್ಲವಾಗಿತ್ತು..ಹೀಗಾಗಿ ನಾನೇ ಮುಂದುವರಿಸಿದೆ. ಅಪ್ಪ ಬ್ಯಾಂಕ್ನಲ್ಲಿ ಇದ್ದಾರೆ. ಅಮ್ಮ ಟೀಚರ್..
ಯಾವ್ ಬ್ಯಾಂಕು?
ಇಂಡಿಯನ್ ಬ್ಯಾಂಕ್...ಫೈನಾನ್ಸ್ ಮ್ಯಾನೇಜರ್..
ನಮ್ಮೂರಲ್ಲಿ ಆ ಬ್ಯಾಂಕ್ ಇಲ್ಲ..ಕೆನರಾ ಒಂದೇ..
ಹೌದಂಕಲ್.. ಆ ಬ್ಯಾಂಕ್ ಜಾಸ್ತಿ ಡಿವಿಶನ್ಸ್ ಇಲ್ಲಾ.. ಬೆಂಗಳೂರಲ್ಲೇ ಇರೋದು ಮೂರ್ನಾಲ್ಕು... ಸುಮ್ಮನೆ ಮಾತಾಡಬೇಕೆಂದು ಆಡಿದ್ದಷ್ಟೆ.
ಪುರಿ ಹೇಳತೊಡಗಿದ.. ಅಪ್ಪಾ ಇವ್ನು ಬೆಂಗಳೂರಲ್ಲೇ ಶಾಲೆ ಕಲಿತದ್ದು...ಎಲ್.ಕೆ.ಜಿ.ಯಿಂದ ಇಲ್ಲಿವರೆಗೂ..ಬೆಂಗಳೂರಲ್ಲಿ ಮನೆ ಇದ್ರೂ ನಮ್ ಹಾಸ್ಟೆಲ್ನಲ್ಲೇ ಇರೋದು...ಬೆಂಗಳೂರ್ನಲ್ಲಿ ದಿನಾ ಓಡಾಟ ಕಷ್ಟ ಅಂತ ಹಾಸ್ಟೆಲ್ ಸೇರ್ಕೊಂಡ..ಆದ್ರೆ ವಾರಕ್ಕೆ ಎರಡು ಸಲ ಮನೆಗೆ ಹೋಗಿ ಬರ್ತಿರ್ತಾ...ಎಕ್ಸಾಮ್ ಮುಗಿತಲ್ಲ..ಅದಕ್ಕೆ ಇಲ್ಲಿಗೆ ಕರ್ಕೊಂಡ್ ಬಂದೆ..
ಒಳ್ಳೆದಾತು..ಇಲ್ಲಿ ಸುಮಾರು ಒಳ್ಳೊಳ್ಳೆ ಜಾಗ ಇದೆ..ಎಲ್ಲೇ ನಾಲ್ಕೈದು ದಿನ ಇದ್ದು ಎಲ್ಲಾ ನೋಡ್ಕೊಂಡ್ ಹೋಗು...
ಇದೇನಿದು ಹದಿನೈದು ದಿನಗಳ ಕ್ಯಾಂಪ್ ಹಾಕುವಾ ಅಂತ ಬಂದ್ರೆ ಇವರು ನಾಲ್ಕೈದು ದಿನ ಅಂತಿದಾರೆ..ಈ ಪುರಿ ಏನೂ ಹೇಳಿಲ್ಲಾ ಅನ್ಸುತ್ತೆ..
ಅಪ್ಪಾ ಇವ್ನು ಇನ್ನು ಹದಿನೈದು ದಿನ ಇಲ್ಲೇ ಇರ್ತಾನೆ.. ಇವ್ನಿಗೆ ಯಕ್ಷಗಾನ ನೋಡ್ಬೇಕಂತೆ..
ಓ.....ಸರಿ. ಇವತ್ತು ಮನೆಲ್ಲೇ ಇರಿ..ನಾಳೆ ಹೊರಡಿ..ಊರು ಸುತ್ಲಿಕ್ಕೆ..ಈಗ ಪಾಂಡು ಬರ್ತಾನೆ...ಅದೇನೋ ಶಾರ್ಟ್ ಆಗಿ ಆ ತಂತಿ ಬೇಲಿ ಸುಟ್ ಹೋಗಿದ್ಯಂತೆ..ಅದನ್ನೊಂದ್ ಸರಿ ಮಾಡ್ ಹೋಗ್ತೀನಿ ಅಂತ ಫೋನ್ನಲ್ಲಿ ಅಂದ..
ಭಾಗವತರು ಮಾತಿಗೆ ಪೂರ್ಣವಿರಾಮ ಇಟ್ಟರು. ನನಗರ್ಥವಾಗದ್ದು ಒಂದೇ 'ಈ ಪಾಂಡು ಯಾರು?'ಅಡಿಗೆ ಮನೆಯಲ್ಲಿನ ಶಬ್ದಕ್ಕಿಂತ ನನ್ನ ಹೊಟ್ಟೆಯಲ್ಲಿ ಇಲಿಗಳು ಕುಟ್ಟುತ್ತಿದ್ದ ತಾಳದ ಶಬ್ದವೇ ದೊಡ್ಡದಾಗಿತ್ತುಆದರೆ ಯಾರಿಗೂ ಕೇಳುತ್ತಿರಲಿಲ್ಲ.ಭಾಗವತರು ಆರಾಮ ಕುರ್ಚಿಯಲ್ಲಿ ಆರಾಮಾಗಿ ಕುಳಿತಿದ್ದು ನೋಡಿದರೆ ಏಳುವ ಆಲೋಚನೆಯೇ ಇದ್ದಂತಿರಲಿಲ್ಲ.. ಪುರಿ ಸೂರ್ಯಪುತ್ರ..ಅವನಿಗೆ ಹಸಿವಾಗುವ ಹೊತ್ತಿಗೆ ಮಧ್ಯಾಹ್ನವಾಗಿರುತ್ತದೆ.
ನನ್ನ ಕರೆಗೆ ಓಗೊಟ್ಟಂತೆ ಅಮ್ಮಮ್ಮ ಒಳಗಿನಿಂದಲೇ ಕರೆದಳು... ವೆಂಟ್ರಣ...ಎಲ್ಲಾ ಬನ್ನಿ..ತಿಂಡಿಗಾತು..
ಬನ್ನಿ.. ಭಾಗವತರು ಎದ್ದು ನಡೆದರು. ಹಿಂಬಾಲಿಸಿ ನಾವು...ಒಳಗಡೆ ಅವಲಕ್ಕಿ,ಚಾ ಸಿದ್ಧವಾಗಿತ್ತು..ಆಗಲೂ ಮೌನ...ಯಾರೂ ಮಾತಾಡುವಂತೆಯೆು ಕಾಣಲಿಲ್ಲ..ನಾನೇ ಪ್ರಾರಂಭಿಸಿದೆ...
ಅಮ್ಮಮ್ಮಾ.. ತಿಂಡಿ ಬಹಳ ಚೆನ್ನಾಗಿದೆ...ಅವಲಕ್ಕಿಗೆ ಹಾಕಿದ ಒಗ್ಗರಣೆ ಪರಿಮಳ ನನಗೆ ಬಹಳ ಇಷ್ಟ...
ನಿಂಗೆ ಇನ್ನೊಂದ್ ಸ್ವಲ್ಪ ಹಾಕ್ಲಾ?..ಸಂಕೋಚ ಮಾಡ್ಕೋಬೇಡ..ಹೊಟ್ಟೆ ತುಂಬಾ ತಿನ್ನು...ನಮ್ಮನೆ ಪುರುಷೋತ್ತಮಂಗೆ ಇಷ್ಟು ಬೇಗ ಹಸಿವಾಗಲ್ಲ..ಅಂವ ಬೆಳಿಗ್ಗೆ ಏಳೋದೇ ಎಂಟ್ ಗಂಟೆಗೆ..
ಹಾಸ್ಟೆಲ್ನಲ್ಲೂ ಅಷ್ಟೆ ಅಮ್ಮಮ್ಮಾ.. ದಿನಾ ತಿಂಡಿಗೆ ಹೋಗುವಾಗ ಕಾಲೇಜ್ ಬೆಲ್ ಹೊಡೆದಿಡ್ತಾರೆ...
ಅದನ್ನೇ ನಾನ್ ಹೇಳೋದು..ಈ ವಯಸ್ಸಿನಲ್ಲಿ ಈ ರೀತಿ ಆದ್ರೆ...ಮುಂದೆ ಏನಾದ್ರೂ ರೋಗ ಗೀಗ ಬಂದ್ರೆ ಅಂತ... ಅಮ್ಮಮ್ಮನ ಮಾತಿನಲ್ಲಿ ಇದ್ದೊಬ್ಬ ಮೊಮ್ಮಗನ ಬಗ್ಗೆ ಕಾಳಜಿ ಎದ್ದು ತೋರುತ್ತಿತ್ತು..
ಅಮ್ಮಮ್ಮಾ ಸಾಕು ನನ್ ವಿಷಯ...ಬೇರೆ ಏನಾದ್ರೂ ಇದ್ರೆ ಹೇಳು.. ಪುರಿ ಹುಸಿಮುನಿಸು ತೋರಿಸಿದ.
ಭಾಗವತರು ತಮ್ಮಷ್ಟಕ್ಕೆ ತಾವು ಚಾ ಕುಡಿಯುತ್ತಲಿದ್ದರು..ನಾನು ಅವರ ಮುಖ ಪದೇ ಪದೇ ಗಮನಿಸುತ್ತಿದ್ದನ್ನು ನೋಡಿದ ಅಮ್ಮಮ್ಮ ನಮ್ಮನೆ ವೆಂಟ್ರಣಂಗೆ ಹಂದಿದೇ ಚಿಂತೆ... ಅಲ್ಲೊಂದ್ಕಡೆ ತಂತಿ ಬೇಲಿ ಕೂಡಾ ಸುಟ್ಟೋಯ್ತು...ಈ ಪುರುಷೋತ್ತಮ ಇಂಜಿನಿಯರ್ ಹೇಳಿ ಹೆಸರಿಗಷ್ಟೆ...ತಂತಿ ಬೇಲಿ ಸುಟ್ಟೋದದ್ದನ್ನ ಸರಿ ಮಾಡೋದ್ ಬಿಡುಒಂದ್ ಸುಟ್ಟೋದ್ ಬಲ್ಬ್ ಬೇರೆ ಹಾಕಲಿಕ್ಕೆ ಹೆದರಿ ಸಾಯ್ತಾ.. ಅಂದ್ರು..
ಅಮ್ಮಮ್ಮಾ ಇವನೂ ಇಂಜಿನಿಯರ್ರೇ.. ಕ್ಲಾಸ್ನಲ್ಲಿ ನನಗಿಂತ ಹೆಚ್ಚು ಮಾರ್ಕ್ಸ್ ಬಂದಿದೆ
ಈ ಮಾತನ್ನು ಹೇಳಿ ಪುರಿ ಅವನಿಗಿಂತ ಹೆಚ್ಚು ಮಾರ್ಕ್ಸ್ ತಗೆದ್ದಿದ್ದಕ್ಕೆ ಇದ್ದ ಸೇಡು ತೀರಿಸಿಕೊಂಡ..ಇಲ್ಲದಿದ್ದರೆ ನನಗ್ಯಾಕೆ ತಂತಿ ಬೇಲಿ ರಿಪೇರಿ ಮಾಡುವ ಕೆಲಸವನ್ನ ಈ ರೀತಿ ಹೇಳ್ತಿದ್ದ?..ಇಂಜಿನಿಯರಿಂಗ್ನಲ್ಲಿ ಜಾಸ್ತಿ ಮಾರ್ಕ್ಸ್ ಬರುವದೇ ಹೊರತು ಅದನ್ನು ತಗೆಯಲಾಗುವುದಿಲ್ಲ... ವಿಷಯ ಅಮ್ಮಮ್ಮನಿಗೆಲ್ಲಿ ಅರ್ಥವಾಗಬೇಕು ಹೇಳಿ..ಅವರು ನನಗೆ ತಂತಿ ಬೇಲಿ ರಿಪೇರಿ ಮಾಡಲು ಬರುತ್ತದೆ ಎಂದು ನಂಬಿದರು...
ನೋಡೋ ವೆಂಟ್ರಣ ಪಾಂಡು ಜೊತೆಗೆ ಇವರನ್ನೂ ತೋಟಕ್ಕೆ ಕರ್ಕೊಂಡ್ ಹೋಗು..ಇಂಜಿನಿಯರ್ಗಳ ತಲೆ ಎಲ್ಲಿಯವರೆಗೆ ಓಡುತ್ತೆ ನೋಡಿಯೆು ಬಿಡೋಣ... ತಮಾಷೆ ಮಾಡುತ್ತಾ ಅಮ್ಮಮ್ಮ ಹಿತ್ತಲ ಕಡೆಗೆ ಹೋದರು... ಈ ಪಾಂಡು ಯಾರು ಅಂತ ಕೇಳೋಣ ಅಂದ್ಕೊಂಡೆ..ಅಷ್ಟರಲ್ಲಿ ಹೊರಗಡೆ ಯಾರೋ ಮೆಟ್ಟಿಲಿಳಿದು ಬರುವ ಶಬ್ದವಾಯಿತು..ಭಾಗವತರು ಅವಸರವಸರವಾಗಿ ತಿಂದು ಹೊರನಡೆದರು...
ಓ ದಿನೇಶ.. ಎಲ್ಲೋ ದಾದ ಬರಲಿಲ್ವಾ..? ಅಮ್ಮಮ್ಮ ಕೇಳುತ್ತಲೇ ಹಿತ್ತಲಿನಿಂದ ಅಂಗಳಕ್ಕೆ ಬಂದರು...ಮನೆಯ ರಚನೆಯೆು ಹಾಗಿತ್ತು...ಹಿತ್ತಲಿನಿಂದ ಮೆಟ್ಟಿಲು ಸ್ಪಷ್ಟವಾಗಿ ಕಾಣುತ್ತಿತ್ತು.. ಅದಲ್ಲದೇ ಹಿತ್ತಲಿನಿಂದಲೇ ನೇರವಾಗಿ ಅಂಗಳಕ್ಕೆ ಹಾದು ಬರಲು ಸಣ್ಣ ದಾರಿಯಿತ್ತು.. ಆಮೇಲೆ ಅರ್ಥವಾಗಿದ್ದು ಕೆಲಸದವರು ಮನೆ ಪ್ರವೇಶಿಸದಂತೆ ಹಿತ್ತಲ ಕಡೆಗೆ ಹೋಗಲು ನೇರವಾದ ಮಾರ್ಗ ಅದು..ಹಳ್ಳಿಗಳಲ್ಲಿ ತಾವು ಮೆಲು ಜಾತಿ ಎಂದು ತಿಳಿದ ಜನ ಅವರೇ ಅಂದುಕೊಂಡ ಕೀಳು ಜಾತಿಯವರಿಗೆ ದಾರಿ ತೋರಿಸುವ ವಿಧಾನ ಅದು...ಅದ್ಸರಿ ಈ ದಿನೇಶ ಯಾರು..?
ಪುರಿಯನ್ನು ಕೇಳಿದೆ... ಪಾಂಡು ಮಗ..
ಅಯ್ಯೋ ಈ ಪಾಂಡು ಯಾರಪ್ಪಾ...?
ಅದೇ ಕಣೋ...ಎಲೆಕ್ಟ್ರಿಶಿಯನ್ನು..ತಂತಿ ಬೇಲಿ ರಿಪೇರಿ...ಹಂದಿ..
ಅಬ್ಬಬ್ಬಾ ಈಗ ಅರ್ಥವಾಯ್ತು.. ಪಾಂಡು ಮಗ ದಿನೇಶ.. ನೋಡಲಿಕ್ಕೆ ಸ್ವಲ್ಪ ಕಪ್ಪು..ಧೋನಿ ತರ ಕೂದಲು ಬಿಟ್ಟಿದ್ದ..ಕಾಲೇಜಿಗೆ ಹೋಗೋ ತರ ಕಾಣ್ತಿದ್ದ... ಕಣ್ಣ ಪಕ್ಕದಲ್ಲಿದ್ದ ಸುಟ್ಟಿದ ಕಲೆ ಸ್ವಲ್ಪ ವಿಚಿತ್ರವಾಗಿ ಕಾಣುವಂತೆ ಮಾಡಿತ್ತು..ಅದಷ್ಟು ಬಿಟ್ಟರೆ ನೋಡಲು ಸುಂದರವಾಗೇ ಇದ್ದ..ಇರಲಿ ಅವನು ಹೇಗಿದ್ದರೆ ನನಗ್ಯಾಕೆ..ಇವನು ಯಾಕೆ ಬಂದ..ಪಾಂಡುಗೆ ಏನೋ ಆಗಿ ಮಗನನ್ನ ಕಳಿಸಿರಬೇಕು...ಇವನಿಗೂ ರಿಪೇರಿ ಕೆಲಸ ಬರುತ್ತೋ ಇಲ್ಲ ಸುಮ್ಮನೆ ವಿಷಯ ತಿಳಿಸೋಣ ಅಂತ ಬಂದ್ನೋ...ಇಲ್ಲ ರಿಪೇರಿ ಮಾಡಬಹುದು.. ಸುಮ್ಮನೆ ವಿಷಯವಾದ್ರೆ ಫೋನ್ನಲ್ಲೇ ಹೇಳ್ಬೋದಿತ್ತು...
ನನ್ನ ಊಹೆ ನಿಜವಾಗಿತ್ತು.. ದಿನೇಶ ಐ.ಟಿ.ಐ ಮಾಡ್ತಿದ್ದಾನೆ..ಇಂತ ರಿಪೇರಿ ವಿಷಯದಲ್ಲಿ ಎತ್ತಿದ ಕೈ.. ಪುರಿಯಂದ ಪರಿಚಯವಾಯಿತು..ಭಾಗವತರು ಒಂದು ಕತ್ತಿ ಹಿಡಿದು ದಿನೇಶನ ಜೊತೆ ತೋಟಕ್ಕೆ ನಡೆದರು.. ಇವನಪ್ಪನಿಗೆ ಬೀಡಿ ಸಹವಾಸ ಬಿಡು ಅಂತ ಹೇಳಿ ಹೇಳಿ ಸಾಕಾಯ್ತು..ನೋಡು ಹೀಗೆ ಆಗೋದು..ಇವತ್ತು ಶ್ವಾಸ ಕಟ್ಟಿದ ಹಾಗಾಯ್ತು ಅಂತಿದ್ದಿ...ನಾಳೆ ಏನಾದ್ರೂ ಹೆಚ್ಚು ಕಡಿಮೆ ಆದ್ರೆ... ಹಿತ್ತಲ ಕಡೆಗೆ ಪುನಃ ಹೊರಟಿದ್ದ ಅಮ್ಮಮ್ಮನ ಮುಂದಿನ ಮಾತುಗಳು ಅಸ್ಪಷ್ಟವಾಗಿದ್ದವು..ಹಳ್ಳಿಗರಲ್ಲಿ ಯಾರಿಗೆ ಏನಾದರೂ ಎಲ್ಲರಿಗೂ ಚಿಂತೆ...
ಅಪ್ಪಾ ನಾವೂ ಬರ್ತೀವಿ.. ಪುರಿ ಬೇರೆ ಯಾವುದೋ ಒಂದು ಚಪ್ಪಲಿ ತಂದ..ಅವನ ಹರಿದು ಹೋದ ಚಪ್ಪಲಿ ಅಂಗಳದ ತುದಿಯಲ್ಲಿ ಇರುವೆಗಳಿಗೆ ಆಹಾರವಾಗುತ್ತಿತ್ತು... ನಿನ್ನ ಶೂ ಎತ್ತಿ ಬೇರೆ ಎಲ್ಲಾದರೂ ಇಡೋ..ಇರುವೆಗಳು ನಿನ್ನ ಸಾಕ್ಸ್ನ ಪರಿಮಳಕ್ಕೆ ಮನಸೋತು ತಿಂದು ಹಾಕಿದರೆ ಮತ್ತೆ ನೀ ಬರಿ ಕಾಲಲ್ಲಿ ತಿರುಗಬೇಕು ನೋಡು.... ಅಯ್ಯೋ ಇದೊಂದು ಗ್ರಹಚಾರವಾಯ್ತುಲ್ಲ... ನಾ ಈ ಊರನ್ನೆಲ್ಲಾ ಶೂ ಹಾಕಿಕೊಂಡು ಸುತ್ತಬೇಕೆ..? ದೇವಸ್ಥಾನಕ್ಕೂ ಇದೇ ಶೂ..ತೋಟಕ್ಕೂ ಇದೇ ಶೂ..? ಪುರಿ..ಹೇಗಾದ್ರೂ ಒಂದ್ ಚಪ್ಪಲಿ ಅರೇಂಜ್ ಮಾಡೋ... ಇಲ್ಲೆಲ್ಲಾ ಶೂ ಹಾಕೊಂಡ್ ಓಡಾಡಲ್ಲ ನಾನು...
ಸರಿ ..ಅತಿಥಿ ದೇವೋ ಭವ.. ಅಂತ ಮತ್ತೊಂದ್ ಚಪ್ಪಲಿ ಜೊತೆ ತಂದ...ಅದನ್ ಹಾಕ್ಕೊಂಡು ಹೊರಟ್ವಿ ತೋಟದ ಕಡೆಗೆ..ಅದೇ ದಾರಿ.. ದೇವಸ್ಥಾನದ ಹತ್ತಿರವೇ ಇತ್ತು ತೋಟ..ಅಲ್ಲೇ ಹಂದಿ ಬಿದ್ದದ್ದು...ಈಗ ದೇವಸ್ಥಾನದ ಹತ್ತಿರ ಯಾರೂ ಇರಲಿಲ್ಲ... ಹಂದಿಯೂ ಸಹ... ಹಂದಿಯನ್ನ ಸಾಬ್ರು ತಗೊಂಡ್ ಹೋದ್ರಂತೆ..
ಪುರಿ ನನ್ನ ಮನವರಿತಂತೆ ಮೌನಕ್ಕೆ ಉತ್ತರಿಸಿದ..
ಅಲ್ವೋ ನಿಮ್ಮೂರಲ್ಲಿ ಜಾತಿ ಜಾತಿ ಅಂತ ಇಷ್ಟೆಲ್ಲಾ ಅಂತಾರಲ್ಲ... ಯಾರೂ ಇದರ ವಿರುದ್ಧ ಮಾತಾಡಲ್ವಾ..?
ಯಾರೋ ಮಾತಾಡ್ತಾರೆ... ಎಲ್ಲರಿಗೂ ಸಮಾಜ ಅಂದ್ರೆ ಭಯ ಇದ್ದೇ ಇರುತ್ತೆ... ಯಾರಾದ್ರೂ ಮಾತಾಡ್ದಾ ಅಂತಿಟ್ಕೋ..ಅವನು ಉಳಿದವರೆಲ್ಲರ ವಿರೋಧ ಕಟ್ಕೋಬೇಕಾಗತ್ತೆ.... ಮುಂದೇನೋ ಹೇಳುತ್ತಾನೆ ಅಂದ್ಕೊಂಡೆ... ಅಷ್ಟಕ್ಕೇ ನಿಲ್ಲಿಸಿಬಿಟ್ಟ... ಆ ಮೌನಕ್ಕೆ ಹೆಚ್ಚು ಅರ್ಥವಿದ್ದಂತೆ ನನಗೂ ಅನ್ನಿಸಲಿಲ್ಲ...
ತೋಟ ಅಂದ್ರೆ ನಾನು ಹೂ ಹಣ್ಣೀನ ಗಿಡ ಬೆಳೆಸುತ್ತಾರೆ ಅಂದ್ಕೊಂಡಿದ್ದೆ...ಅಲ್ಲ ಅಲ್ಲೂ ಅಡಿಕೆ ಗಿಡಗಳೇ..ಅಲ್ಲಲ್ಲಿ ತೆಂಗಿನ ಮರ.. ಒಂದೆರಡು ಬಾಳೆ ಗಿಡ..ಅಷ್ಟೇ..ಉಳಿದದ್ದೆಲ್ಲಾ ಕಳೆಗಳೇ..ಕಾಲಿರಿಸಲು ಜಾಗ ಹುಡುಕಬೇಕು..
ಇಲ್ಲೆಲ್ಲೋ ದಾರಿ ಇತ್ತಲ್ಲಾ..? ನನಗೆ ದಾರಿ ತೋರಿಸುವ ಗೈಡ್ ಪುರಿಯೆು ಈ ರೀತಿ ಪ್ರಶ್ನೆ ಮಾಡಬಾರದಿತ್ತು... ನಾವ್ ನಡೆದದ್ದೇ ದಾರಿ ಎಂಬಂತೆ ನಡೆಯುತ್ತಿದ್ದೆವು..ತೋಟದಲ್ಲಿ ನಡೆಯುವುದು ಕಾಡಿನಲ್ಲಿ ನಡೆದಂತಾಗುತ್ತಿತ್ತು..ಸುಮಾರು ಹತ್ತೆಕರೆ ಇರಬಹುದು..ತೋಟದ ಆ ಅಂಚಿಗೆ ಒಂದು ಪಂಪ್ ಹೌಸ್..ಭಾಗವತರೂ ದಿನೇಶನೂ ಅಲ್ಲೇ ಕುಳಿತಿದ್ದುದು ಕಾಣುತ್ತಿತ್ತು...ದಿನೇಶ ಯಾವುದೋ ವೈರನ್ನು ಹಲ್ಲಿನಿಂದ ಕಚ್ಚಿ ಎಳೆಯುತ್ತಿದ್ದ...ಭಾಗವತರು ಕಾಲಿಗೆ ಮುತ್ತಿಕೊಂಡಿದ್ದ ಸೊಳ್ಳೆಗಳನ್ನ ಸಾಯಿಸುವ ಕಾರ್ಯದಲ್ಲಿ ಮಗ್ನವಾಗಿದ್ದರು..
ಎಷ್ಟಾದರೂ ಇಂಜಿನಿಯರ್ ಅಲ್ಲವೇ..? ಏನಾಗಿದೆ.. ? ನಾನೇ ಆಫೀಸರ್ ತರಹ ಕೇಳಿದೆ... ಏನೂ ಇಲ್ಲಾ.. ಹಂದಿ ಬಿತ್ತಲ್ಲಾ... ಎರಡೂ ವೈರ್ ಶಾರ್ಟ್ಆಗಿ ಬ್ಯಾಟರಿ ಹತ್ತಿರ ಸುಟ್ಟು ಹೋಗಿದೆ..ಸ್ವಲ್ಪ ಕಟ್ ಮಾಡಿ ಮತ್ತೆ ಜಾಯಿಂಟ್ ಮಾಡಿದರೆ ಸರಿ ಆಗುತ್ತೆ ದಿನೇಶ ವಿವರಿಸಿದ..ನಾನೂ ನಮ್ಮ ಲ್ಯಾಬ್ನಲ್ಲಿ ಸುಟ್ಟು ಹೋದಂತೆ ಎನೋ ಆಗಿರಬೇಕು ಅಂದುಕೊಂಡೆ..
ಆ ದಿನೇಶನ ಬಗ್ಗೆ ಸ್ವಲ್ಪ ಹೆಚ್ಚು ಬರೆಯಬೇಕು ಅನಿಸುತ್ತಿದೆ...ಅದಕ್ಕೆ ಕಾರಣ ಇಲ್ಲವೇನೆಂದಲ್ಲ...ನಮ್ಮ ವಯಸ್ಸಿನ ಹುಡುಗ ಈ ರೀತಿ ದುಡಿದು ಓದುತ್ತಿದ್ದಾನೆ ಅಂದರೆ ನಮಗೆ ಕುತೂಹಲ ಮೂಡುವುದು ಸಹಜ...ಆ ಕುತೂಹಲವೇ ಮಾತಿಗೆ ತಿರುಗಿತು..
ದಿನೇಶ್...ಇವತ್ತು ನಿಮಗೆ ಕಾಲೇಜಿಲ್ವಾ..?
ಏನ್ ಸರ್ ಇವತ್ತು ಭಾನುವಾರವಲ್ವಾನೀವ್ ನನ್ನನ್ನು ನೀವು ತಾವು ಅಂತ ಕರೀಬೇಡಿ.. ಸರಿ ಇರಲ್ಲ...
ಸರಿ ನೀನೂ ನನ್ನನ್ನು ಸರ್ ಅಂತೆಲ್ಲಾ ಕರೀಬೇಡ
ಛೆ..ಕಾಲೇಜಿಲ್ಲ ಅಂದ್ರೆ ದಿನ,ತಿಥಿ,ವಾರ,ನಕ್ಷತ್ರ ಎಲ್ಲವೂ ಮರೆತು ಹೋಗುತ್ತದೆ..
ಇದನ್ನೆಲ್ಲಾ ಕಾಲೇಜಿನಲ್ಲೆ ಕಲಿತದ್ದಾ?
ಕಾಲೇಜಾ..? ಹೋಗ್ದೆ ನಾಲ್ಕೈದು ದಿನ ಆಯ್ತು..ಕಾಲೇಜಿನಲ್ಲಿ ಯಾರು ಇದನ್ನೆಲ್ಲಾ ಹೇಳ್ಕೊಡ್ತಾರೆ..? ಎಲ್ಲಾ ಅಪ್ಪ ಮಾಡುವುದನ್ನು ನೋಡಿ ನೋಡಿ ಕಲಿತದ್ದು...ಜೀವನ ಆಗಬೇಕಲ್ಲಾ..
ದಿನೇಶ ನಮಗಿಂತ ಎತ್ತರದಲ್ಲಿದ್ದ.. ಅಪ್ಪ ಹೇಳುವುದನ್ನೂ ಕೇಳದೆ ನಾವು ಮಾಡಿದ್ದೇ ಸರಿ ಎನ್ನುವ ನಮ್ಮ ನಡುವೆ ಅಪ್ಪನಿಂದ ಕಲಿತು ಅಪ್ಪನಿಗೆ ಆಸರೆಯಾಗಿರುವ ದಿನೇಶ ದೊಡ್ಡವನಂತೆ ಕಂಡ... ಜೀವನ ಬುದ್ಧಿಯನ್ನು ಸ್ವಲ್ಪ ಹೆಚ್ಚೇ ಬೆಳೆಸಿತ್ತು..
ಭಾಗವತರೇ ಇದು.. ಸರಿಯಾಯ್ತು...ನಾ ಹೊರಡ್ತೇನೆ.. ದಿನೇಶ ಹೊರಡಲು ಸಿದ್ಧನಾದ.
ಏನ್ ಸರಿಯಾಯ್ತೋ ಏನೋ...ಮತ್ತೆ ಹಂದಿ ಬಂದು ಎಲ್ಲಾ ಹಾಳು ಮಾಡದಿದ್ರೆ ಸಾಕು.. ನೀ ಮನೆ ಕಡೆ ಬಂದು ಅವಲಕ್ಕಿ ತಿಂದ್ ಹೋಗಬಹುದಿತ್ತು... ನುಸಿ ಹೊಡೆಯುತ್ತಿದ್ದ ಭಾಗವತರು ಎದ್ದು ನಿಂತರು..
ಇಲ್ಲಾ..ಅಪ್ಪನಿಗೆ ಔಷಧ ತರ್ಲಿಕ್ಕೆ ಹೋಗಬೇಕು...
ಸರಿ..ಪಾಂಡುಗೆ ಹೇಳು..ದುಡ್ಡು ಇನ್ನೊಂದಿನ ಕೊಡ್ತಾರಂತೆ..ಅಂತ...
ಆದ್ರೂ..ಇವತ್ತು ಕೊಟ್ಟಿದ್ರೆ .......
ಇಲ್ಲಾ ಅಂತ ಹೇಳಿದ್ನಲ್ಲಾ...ಮೊದ್ಲೇ ಅಡಿಕೆ ರೇಟಿಲ್ಲಾ...ಈ ಹಂದಿ ಬಂದು ಇಷ್ಟೆಲ್ಲಾ ರಾಮಾಯಣ ಮಾಡಿದೆ..ದುಡ್ಡೆಲ್ಲಾ ಕುಮ್ಟೆಗೆ ಹೋಗಿ ಬಂದ ಮೇಲೆ.. ಸ್ವಲ್ಪ ಮುನಿಸಿನಿಂದಲೇ ಹೇಳಿದರು ಭಾಗವತರು.
ದಿನೇಶ ಒಂದೂ ಮಾತನಾಡದೆ ಹೊರಟು ಹೋದ..ಅದು ಸಹಜ..ಕೆಲಸ ಮಾಡಿದ ಮೇಲೆ ರೇಗಾಡಿದರೆ ಎಂಥವರಿಗೂ ಬೇಸರವಾಗುತ್ತದೆ..ಅದೂ ನಮ್ಮಂಥ ಬಿಸಿರಕ್ತದವರಿಗೆ...
ಇಷ್ಟೊತ್ತಿಗೆ ಸೂರ್ಯ ಮೇಲೆ ಬಂದು ಆಕಾಶದ ನೀಲಿಯನ್ನು ಬೆಳ್ಳಗೆ ಮಾಡಿದ್ದ.. ತೋಟದ ಹಸಿರಿನ ನಡುವೆ ಅಲ್ಲಲ್ಲಿ ಬಿದ್ದ ಬಿಸಿಲು ಕಳೆಗಳ ಮೇಲೆ ಚಿತ್ತಾರ ಬಿಡಿಸಿತ್ತು.. ಭಾಗವತರು ಬಂದ ದಾರಿಯಲ್ಲೇ ಮರಳತೊಡಗಿದರು.. ಪುರುಷೋತ್ತಮಾ.. ಬನ್ನಿ ಮನೆಗೆ ಹೋಗುವ..ಹೊತ್ತಾತು..ಸ್ನಾನ ಮಾಡಿ ದೇವರಪೂಜೆ ಬೇರೆ ಮಾಡಬೇಕು... ಪೂಜೆಯನ್ನು ಬೇರೆ ಯಾರದ್ದೋ ಸಲುವಾಗಿ ಮಾಡುವಂತ ಧ್ವನಿಯಲ್ಲಿ ಭಾಗವತರು ಕೂಗಿದರು.
ನಾನೂ ಪುರಿಯೂ ನಿಧಾನವಾಗಿ ಹೆಜ್ಜೆ ಹಾಕತೊಡಗಿದೆವು..ದಿನೇಶನ ಬಗ್ಗೆ ಕೇಳಬೇಕೆನಿಸಿದರೂ ಕೇಳಲಿಲ್ಲ..
ನಾನು ಮನೆಗೆ ಹೊಸಬನಾಗಿದ್ದರಿಂದ ಎಲ್ಲರಿಗಿಂತ ಹಿಂದಿದ್ದೆವೆಂಕಟರಮಣ ಭಾಗವತರು ದಡ ದಡನೆ ನಡೆದು ಬಂದು ಒಳ ಪ್ರವೇಶಿಸಿದರು...ಪುರಿ ನನ್ನ ಕಷ್ಟನೋಡುತ್ತಾ ಬಾಗಿಲ ಬಳಿ ನಿಂತಿದ್ದ. ಶೂ ಕಳಚಿಟ್ಟು ಕಲ್ತೊಳೆಯುವ ನೀರಿಗಾಗಿ ಅರಸಿದೆ...ಪುರಿ ಅಂಗಳದ ಆ ತುದಿಯಲ್ಲಿದ್ದ ಡ್ರಮ್ ಒಂದನ್ನು ತೋರಿಸಿದ...ಶೂ ಹಾಕಿದ್ದರಿಂದ ಕಾಲೇನೂ ಕೊಳೆಯಾಗಿರಲಿಲ್ಲ..ಶಾಸ್ತ್ರಕ್ಕೆಂದು ನೀರು ಹಾಕಿಕೊಂಡು ಒಳ ಹೊಕ್ಕೆ...
ಬಂದು ಎರಡು ನಿಮಿಷವಾದರೂ ಯಾರೂ ಕಾಣಿಸಲಿಲ್ಲ...ಭಾಗವತರು ಒಳಗಡೆ ಯಾವುದೋ ಹಳೇ ಡೈರಿ ಹಿಡಿದುಕೊಂಡು ಏನೋ ಹುಡುಕುತ್ತಿದ್ದರು..ಪುರಿಯನ್ನು ಕೇಳಿದೆ ... ಅಜ್ಜಿ ಎಲ್ಲೋ..? ಪುರಿಯ ಅಮ್ಮನಿಲ್ಲದ ವಿಚಾರ ಗೊತ್ತಿತ್ತು. ಪುರಿಗೆ ಅವನಮ್ಮನನ್ನು ನೋಡಿದ ನೆನಪೂ ಇರಲಿಲ್ಲ. ಇಲ್ಲೇ ಎಲ್ಲೋ ಇರಬೇಕೋ...ನೋಡುತ್ತೇನೆ ತಡಿ... ಅಮ್ಮಮ್ಮಾ... ಕರೆಯುತ್ತಾ ಎದ್ದು ಒಳಮನೆಗೆ ನಡೆದ....ನಾನಿಲ್ಲಿ ಒಬ್ಬಂಟಿ..ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದೆ.. ಹಳೇ ಮನೆ..ಆದರೂ ಅಷ್ಟೋಂದು ಹಳೆಯದಲ್ಲ..ಗೋಡೆಯ ಮಸುಕು ಬಿಳಿ ಬಣ್ಣ ಸುಮಾರು ಮೂರು ವರ್ಷದಷ್ಟು ಹಳೆಯದಿರಬಹುದು....ಗೋಡೆಯ ಆ ಮೂಲೆಯಲ್ಲಿ ಉದ್ದದ ಕೊಂಬಿರುವ ಕಡವೆಯ ಮುಖ..ಅದಕ್ಕೆ ತೂಗುಹಾಕಿರುವ ಒಂದು ಶರ್ಟ್ ಮತ್ತು ಒಂದು ಕೈಚೀಲ...ಪಕ್ಕದಲ್ಲೇ ಹಾರ ಹಾಕಿದ ಪುರಿಯ ಅಮ್ಮನ ಫೋಟೋ...ನನ್ನ ಕಣ್ಣು ಮನೆಯನ್ನೆಲ್ಲಾ ಪರೀಕ್ಷಿಸಿತು.
ಭಾಗವತರು ಹೊರಬಂದರು..ಡೈರಿ ಸಮೇತ.. ಎದ್ದು ನಿಲ್ಲಬೇಕೋ ಕುಳಿತೇ ಇರಬೇಕೋ ಎಂಬ ಗೊಂದಲದಲ್ಲಿರುವಾಗಲೇ ಹೊರ ನಡೆದರು...ನನೊಬ್ಬ ಇದ್ದುದನ್ನು ಗಮನಿಸದೇ...ಹಂದಿಯ ವಿಚಾರ ಇನ್ನೂ ಮುಗಿದಿಲ್ಲ ಅಂದುಕೊಂಡೆ...ಅಷ್ಟರಲ್ಲೇ ಅಜ್ಜಿ ಮೊಮ್ಮಗ ಹೊರಬಂದರು... ಅಮ್ಮಮ್ಮ ಇಂವ ನನ್ನ ಫ್ರೆಂಡ್.. ಪುರಿಯಿಂದ ನನ್ನ ಪರಿಚಯ..ನಾನು ಹೋಗಿ ಕಾಲಿಗೆ ಬಿದ್ದೆ....ಅಮ್ಮಮ್ಮ ನಾನಂದುಕೊಂಡಷ್ಟು ಮುದುಕಿಯಲ್ಲ...ತಲೆಗೂದಲೆಲ್ಲಾ ಹಣ್ಣಾಗಿದ್ದವು...ಚರ್ಮ ಅಲ್ಲಲ್ಲಿ ಸುಕ್ಕುಗಟ್ಟಿತ್ತು..ಆದರೆ ಕಣ್ಣುಗಳಲ್ಲಿನ ಚೈತನ್ಯ ಕುಂದಿರಲಿಲ್ಲ... ಯಾವ ಜಾತಿ?... ಕೇಳಿಯೆು ಬಿಟ್ಟರು...ಪುರಿ ಮೊದಲೇ ಹೇಳಿದ್ದ ..ಈ ಪ್ರಶ್ನೆ ಕೇಳಿಯೆು ಕೇಳುತ್ತಾರೆಂದು... ನಮ್ದೇ. ಅಮ್ಮಮ್ಮ.. ಪುರಿ ಉತ್ತರಿಸಿದ.
ಅದು ಸಹಜ. ಅದಕ್ಕೇ ಜನರೇಷನ್ ಗ್ಯಾಪ್ ಅನ್ನೋದು...ನನಗೇನೂ ಬೇಸರವಾಗಲಿಲ್ಲ..ತಾವು ಜೀವನದುದ್ದಕ್ಕೂ ಕಾಪಾಡಿಕೊಂಡು ಬಂದಂತ ಮಡಿ-ಮೈಲಿಗೆಯನ್ನು ತನ್ನ ಕುಟುಂಬದ ಮರಿಯೊಂದು ನಾಶಮಾಡುವುದು ಯಾರಿಗೂ ಇಷ್ಟವಾಗಲ್ಲ.ಅವರ ಸಮಾಧಾನಕ್ಕೆ ನಾವು ಹೊಂದಿಕೊಂಡು ಹೋದರೆ ನಮಗೂ ನಷ್ಟವೇನಿಲ್ಲ....ತತ್ತ್ವಜ್ಞಾನಿಯಂತೆ ಯೋಚಿಸತೊಡಗಿದೆ...ನನ್ನ ಮನಸ್ಸಿನಲ್ಲಿರುವ ಎಲ್ಲಾ ಯೋಚನೆಗಳೂ ಬೇರೆ ಯಾರಿಗಾದರೂ ಗೊತ್ತಾಗುವಂತಿದ್ದರೆ ಅವರು ನನಗೆ ಮಾಸ್ಟರ್ ಆಫ್ ಫಿಲಾಸಫಿ ಕೊಡಿಸುತ್ತಿದ್ದರು...ಇರಲಿ ಅಂತ ಭಾಗ್ಯ ನನಗಿಲ್ಲ...
ನಾನೂ ಅಜ್ಜಿಯನ್ನು ಪುರಿಯಂತೆ ಅಮ್ಮಮ್ಮ ಎಂದು ಕರೆಯಲು ನಿರ್ಧರಿಸಿದೆ.. ಒಲೆ ಮೇಲೆ ನೀರಿಟ್ಟು ಬರ್ತೇನೆ..ಅವಲಕ್ಕಿ ಕಲ್ಸಾಗಿದೆ..ವೆಂಟ್ರಣ ಬರ್ಲಿ ಎಲ್ಲರೂ ಚಾ ಕುಡ್ಯೋಣ ಅನ್ನುತ್ತಾ ಅಜ್ಜಿ ಅಲ್ಲ ಅಮ್ಮಮ್ಮ ಒಳಗೆ ಹೋದರು...ಹೌದು ಈ ಭಾಗವತರು ಎಲ್ಲಿಗೆ ಹೋದರು...ಆಲೋಚನೆಗೆ ದಾರಿಮಾಡಿಕೊಡದೆ ಪುರಿಯೆು ಹೇಳಿದ... ಅಪ್ಪ ಇಲ್ಲೇ ಫೋನ್ ಮಾಡಿ ಬರಲು ಹೋಗಿದ್ದಾರೆ..ಆ ಪಾಂಡುಗೆ..ಎಲ್ಲಾ ಆ ಹಂದಿಯಿಂದ ಇದೇನಿದು ..ಈ ಪುರಿ ನನಗೆ ಎಲ್ಲಾ ಗೊತ್ತಿರುವಂತೆ ಹೇಳ್ತಾ ಇದ್ದಾನಲ್ಲಾ..ನನಗೇನು ಗೊತ್ತಿರಬೇಕು ..ಯಾವ ಪಾಂಡುನೋ ಎನೋ..ಈ ಹಂದಿ ನಿಜವಾಗಲೂ ಅಪ್ಪ ಮಗನ ತಲೆ ಕೆಡಿಸಿದೆ ಅಂದುಕೊಂಡೆ..
ಗಂಟೆ ಎಂಟೂವರೆ. ವೆಂಕಟರಮಣ ಭಾಗವತರ ಪತ್ತೆ ಇಲ್ಲ.ಪುರಿಯನ್ನು ಕೇಳಿದೆ.. ಎಲ್ಲೋ ನಿಮ್ಮಪ್ಪ..ಏನ್ ಫೋನ್ ಮಾಡಕ್ಕೋಗಿದಾರೋ ಇಲ್ಲಾ... ಇಲ್ಲೇ ಪಕ್ಕದಲ್ಲಿ ದೇವಸ್ಥಾನದ ಜೋಯಿಸರ ಮನೆಯಲ್ಲಿ ಫೋನಿದೆ...ಇನ್ನೇನ್ ಬಂದ್ಬಿಡ್ತಾನೆ.. ಅಡುಗೆ ಮನೆಯಿಂದಲೇ ಅಮ್ಮಮ್ಮ ಹೇಳಿದ್ದು. ಅಷ್ಟರಲ್ಲೇ ಭಾಗವತರ ಆಗಮನ. ಆದರೆ ಈಗ ನಡಿಗೆ ನಿಧಾನವಾಗಿತ್ತು..ಅಷ್ಟೊಂದು ಬಿರುಸಿರಲಿಲ್ಲ..ಒಳಗೆ ಬಂದವರೇ ಫ್ಯಾನ್ ಸ್ವಿಚ್ ಅದುಮಿದರು... ತಥ್..ಹಾಳಾದ ಕರೆಂಟು... ಕರ್ನಾಟಕಕ್ಕೆ ಕರೆಂಟ್ ಕೊಡುವ ಜೋಗ್ ಜಲಪಾತಕ್ಕೆ ಕಾರಣವಾದ ಶರಾವತಿ ನಾಡಿನಲ್ಲಿ ಕರೆಂಟ್ ಇಲ್ಲ. ಯಾವೂರು...? ನನಗೆ ಮೊದಲ ಪ್ರಶ್ನೆ.
ಬೆಂಗಳೂರು ಅಂಕಲ್... ನಿಮ್ಮ ಮಗನ ಕ್ಲಾಸ್ಮೇಟ್..
ನಿಮ್ಮಪ್ಪಾಮ್ಮ..
ಅವರೂ ಬೆಂಗಳೂರೇ.. ಆದರೆ ಅವರ ಪ್ರಷ್ನೆ ಅದಲ್ಲವಾಗಿತ್ತು..ಹೀಗಾಗಿ ನಾನೇ ಮುಂದುವರಿಸಿದೆ. ಅಪ್ಪ ಬ್ಯಾಂಕ್ನಲ್ಲಿ ಇದ್ದಾರೆ. ಅಮ್ಮ ಟೀಚರ್..
ಯಾವ್ ಬ್ಯಾಂಕು?
ಇಂಡಿಯನ್ ಬ್ಯಾಂಕ್...ಫೈನಾನ್ಸ್ ಮ್ಯಾನೇಜರ್..
ನಮ್ಮೂರಲ್ಲಿ ಆ ಬ್ಯಾಂಕ್ ಇಲ್ಲ..ಕೆನರಾ ಒಂದೇ..
ಹೌದಂಕಲ್.. ಆ ಬ್ಯಾಂಕ್ ಜಾಸ್ತಿ ಡಿವಿಶನ್ಸ್ ಇಲ್ಲಾ.. ಬೆಂಗಳೂರಲ್ಲೇ ಇರೋದು ಮೂರ್ನಾಲ್ಕು... ಸುಮ್ಮನೆ ಮಾತಾಡಬೇಕೆಂದು ಆಡಿದ್ದಷ್ಟೆ.
ಪುರಿ ಹೇಳತೊಡಗಿದ.. ಅಪ್ಪಾ ಇವ್ನು ಬೆಂಗಳೂರಲ್ಲೇ ಶಾಲೆ ಕಲಿತದ್ದು...ಎಲ್.ಕೆ.ಜಿ.ಯಿಂದ ಇಲ್ಲಿವರೆಗೂ..ಬೆಂಗಳೂರಲ್ಲಿ ಮನೆ ಇದ್ರೂ ನಮ್ ಹಾಸ್ಟೆಲ್ನಲ್ಲೇ ಇರೋದು...ಬೆಂಗಳೂರ್ನಲ್ಲಿ ದಿನಾ ಓಡಾಟ ಕಷ್ಟ ಅಂತ ಹಾಸ್ಟೆಲ್ ಸೇರ್ಕೊಂಡ..ಆದ್ರೆ ವಾರಕ್ಕೆ ಎರಡು ಸಲ ಮನೆಗೆ ಹೋಗಿ ಬರ್ತಿರ್ತಾ...ಎಕ್ಸಾಮ್ ಮುಗಿತಲ್ಲ..ಅದಕ್ಕೆ ಇಲ್ಲಿಗೆ ಕರ್ಕೊಂಡ್ ಬಂದೆ..
ಒಳ್ಳೆದಾತು..ಇಲ್ಲಿ ಸುಮಾರು ಒಳ್ಳೊಳ್ಳೆ ಜಾಗ ಇದೆ..ಎಲ್ಲೇ ನಾಲ್ಕೈದು ದಿನ ಇದ್ದು ಎಲ್ಲಾ ನೋಡ್ಕೊಂಡ್ ಹೋಗು...
ಇದೇನಿದು ಹದಿನೈದು ದಿನಗಳ ಕ್ಯಾಂಪ್ ಹಾಕುವಾ ಅಂತ ಬಂದ್ರೆ ಇವರು ನಾಲ್ಕೈದು ದಿನ ಅಂತಿದಾರೆ..ಈ ಪುರಿ ಏನೂ ಹೇಳಿಲ್ಲಾ ಅನ್ಸುತ್ತೆ..
ಅಪ್ಪಾ ಇವ್ನು ಇನ್ನು ಹದಿನೈದು ದಿನ ಇಲ್ಲೇ ಇರ್ತಾನೆ.. ಇವ್ನಿಗೆ ಯಕ್ಷಗಾನ ನೋಡ್ಬೇಕಂತೆ..
ಓ.....ಸರಿ. ಇವತ್ತು ಮನೆಲ್ಲೇ ಇರಿ..ನಾಳೆ ಹೊರಡಿ..ಊರು ಸುತ್ಲಿಕ್ಕೆ..ಈಗ ಪಾಂಡು ಬರ್ತಾನೆ...ಅದೇನೋ ಶಾರ್ಟ್ ಆಗಿ ಆ ತಂತಿ ಬೇಲಿ ಸುಟ್ ಹೋಗಿದ್ಯಂತೆ..ಅದನ್ನೊಂದ್ ಸರಿ ಮಾಡ್ ಹೋಗ್ತೀನಿ ಅಂತ ಫೋನ್ನಲ್ಲಿ ಅಂದ..
ಭಾಗವತರು ಮಾತಿಗೆ ಪೂರ್ಣವಿರಾಮ ಇಟ್ಟರು. ನನಗರ್ಥವಾಗದ್ದು ಒಂದೇ 'ಈ ಪಾಂಡು ಯಾರು?'ಅಡಿಗೆ ಮನೆಯಲ್ಲಿನ ಶಬ್ದಕ್ಕಿಂತ ನನ್ನ ಹೊಟ್ಟೆಯಲ್ಲಿ ಇಲಿಗಳು ಕುಟ್ಟುತ್ತಿದ್ದ ತಾಳದ ಶಬ್ದವೇ ದೊಡ್ಡದಾಗಿತ್ತುಆದರೆ ಯಾರಿಗೂ ಕೇಳುತ್ತಿರಲಿಲ್ಲ.ಭಾಗವತರು ಆರಾಮ ಕುರ್ಚಿಯಲ್ಲಿ ಆರಾಮಾಗಿ ಕುಳಿತಿದ್ದು ನೋಡಿದರೆ ಏಳುವ ಆಲೋಚನೆಯೇ ಇದ್ದಂತಿರಲಿಲ್ಲ.. ಪುರಿ ಸೂರ್ಯಪುತ್ರ..ಅವನಿಗೆ ಹಸಿವಾಗುವ ಹೊತ್ತಿಗೆ ಮಧ್ಯಾಹ್ನವಾಗಿರುತ್ತದೆ.
ನನ್ನ ಕರೆಗೆ ಓಗೊಟ್ಟಂತೆ ಅಮ್ಮಮ್ಮ ಒಳಗಿನಿಂದಲೇ ಕರೆದಳು... ವೆಂಟ್ರಣ...ಎಲ್ಲಾ ಬನ್ನಿ..ತಿಂಡಿಗಾತು..
ಬನ್ನಿ.. ಭಾಗವತರು ಎದ್ದು ನಡೆದರು. ಹಿಂಬಾಲಿಸಿ ನಾವು...ಒಳಗಡೆ ಅವಲಕ್ಕಿ,ಚಾ ಸಿದ್ಧವಾಗಿತ್ತು..ಆಗಲೂ ಮೌನ...ಯಾರೂ ಮಾತಾಡುವಂತೆಯೆು ಕಾಣಲಿಲ್ಲ..ನಾನೇ ಪ್ರಾರಂಭಿಸಿದೆ...
ಅಮ್ಮಮ್ಮಾ.. ತಿಂಡಿ ಬಹಳ ಚೆನ್ನಾಗಿದೆ...ಅವಲಕ್ಕಿಗೆ ಹಾಕಿದ ಒಗ್ಗರಣೆ ಪರಿಮಳ ನನಗೆ ಬಹಳ ಇಷ್ಟ...
ನಿಂಗೆ ಇನ್ನೊಂದ್ ಸ್ವಲ್ಪ ಹಾಕ್ಲಾ?..ಸಂಕೋಚ ಮಾಡ್ಕೋಬೇಡ..ಹೊಟ್ಟೆ ತುಂಬಾ ತಿನ್ನು...ನಮ್ಮನೆ ಪುರುಷೋತ್ತಮಂಗೆ ಇಷ್ಟು ಬೇಗ ಹಸಿವಾಗಲ್ಲ..ಅಂವ ಬೆಳಿಗ್ಗೆ ಏಳೋದೇ ಎಂಟ್ ಗಂಟೆಗೆ..
ಹಾಸ್ಟೆಲ್ನಲ್ಲೂ ಅಷ್ಟೆ ಅಮ್ಮಮ್ಮಾ.. ದಿನಾ ತಿಂಡಿಗೆ ಹೋಗುವಾಗ ಕಾಲೇಜ್ ಬೆಲ್ ಹೊಡೆದಿಡ್ತಾರೆ...
ಅದನ್ನೇ ನಾನ್ ಹೇಳೋದು..ಈ ವಯಸ್ಸಿನಲ್ಲಿ ಈ ರೀತಿ ಆದ್ರೆ...ಮುಂದೆ ಏನಾದ್ರೂ ರೋಗ ಗೀಗ ಬಂದ್ರೆ ಅಂತ... ಅಮ್ಮಮ್ಮನ ಮಾತಿನಲ್ಲಿ ಇದ್ದೊಬ್ಬ ಮೊಮ್ಮಗನ ಬಗ್ಗೆ ಕಾಳಜಿ ಎದ್ದು ತೋರುತ್ತಿತ್ತು..
ಅಮ್ಮಮ್ಮಾ ಸಾಕು ನನ್ ವಿಷಯ...ಬೇರೆ ಏನಾದ್ರೂ ಇದ್ರೆ ಹೇಳು.. ಪುರಿ ಹುಸಿಮುನಿಸು ತೋರಿಸಿದ.
ಭಾಗವತರು ತಮ್ಮಷ್ಟಕ್ಕೆ ತಾವು ಚಾ ಕುಡಿಯುತ್ತಲಿದ್ದರು..ನಾನು ಅವರ ಮುಖ ಪದೇ ಪದೇ ಗಮನಿಸುತ್ತಿದ್ದನ್ನು ನೋಡಿದ ಅಮ್ಮಮ್ಮ ನಮ್ಮನೆ ವೆಂಟ್ರಣಂಗೆ ಹಂದಿದೇ ಚಿಂತೆ... ಅಲ್ಲೊಂದ್ಕಡೆ ತಂತಿ ಬೇಲಿ ಕೂಡಾ ಸುಟ್ಟೋಯ್ತು...ಈ ಪುರುಷೋತ್ತಮ ಇಂಜಿನಿಯರ್ ಹೇಳಿ ಹೆಸರಿಗಷ್ಟೆ...ತಂತಿ ಬೇಲಿ ಸುಟ್ಟೋದದ್ದನ್ನ ಸರಿ ಮಾಡೋದ್ ಬಿಡುಒಂದ್ ಸುಟ್ಟೋದ್ ಬಲ್ಬ್ ಬೇರೆ ಹಾಕಲಿಕ್ಕೆ ಹೆದರಿ ಸಾಯ್ತಾ.. ಅಂದ್ರು..
ಅಮ್ಮಮ್ಮಾ ಇವನೂ ಇಂಜಿನಿಯರ್ರೇ.. ಕ್ಲಾಸ್ನಲ್ಲಿ ನನಗಿಂತ ಹೆಚ್ಚು ಮಾರ್ಕ್ಸ್ ಬಂದಿದೆ
ಈ ಮಾತನ್ನು ಹೇಳಿ ಪುರಿ ಅವನಿಗಿಂತ ಹೆಚ್ಚು ಮಾರ್ಕ್ಸ್ ತಗೆದ್ದಿದ್ದಕ್ಕೆ ಇದ್ದ ಸೇಡು ತೀರಿಸಿಕೊಂಡ..ಇಲ್ಲದಿದ್ದರೆ ನನಗ್ಯಾಕೆ ತಂತಿ ಬೇಲಿ ರಿಪೇರಿ ಮಾಡುವ ಕೆಲಸವನ್ನ ಈ ರೀತಿ ಹೇಳ್ತಿದ್ದ?..ಇಂಜಿನಿಯರಿಂಗ್ನಲ್ಲಿ ಜಾಸ್ತಿ ಮಾರ್ಕ್ಸ್ ಬರುವದೇ ಹೊರತು ಅದನ್ನು ತಗೆಯಲಾಗುವುದಿಲ್ಲ... ವಿಷಯ ಅಮ್ಮಮ್ಮನಿಗೆಲ್ಲಿ ಅರ್ಥವಾಗಬೇಕು ಹೇಳಿ..ಅವರು ನನಗೆ ತಂತಿ ಬೇಲಿ ರಿಪೇರಿ ಮಾಡಲು ಬರುತ್ತದೆ ಎಂದು ನಂಬಿದರು...
ನೋಡೋ ವೆಂಟ್ರಣ ಪಾಂಡು ಜೊತೆಗೆ ಇವರನ್ನೂ ತೋಟಕ್ಕೆ ಕರ್ಕೊಂಡ್ ಹೋಗು..ಇಂಜಿನಿಯರ್ಗಳ ತಲೆ ಎಲ್ಲಿಯವರೆಗೆ ಓಡುತ್ತೆ ನೋಡಿಯೆು ಬಿಡೋಣ... ತಮಾಷೆ ಮಾಡುತ್ತಾ ಅಮ್ಮಮ್ಮ ಹಿತ್ತಲ ಕಡೆಗೆ ಹೋದರು... ಈ ಪಾಂಡು ಯಾರು ಅಂತ ಕೇಳೋಣ ಅಂದ್ಕೊಂಡೆ..ಅಷ್ಟರಲ್ಲಿ ಹೊರಗಡೆ ಯಾರೋ ಮೆಟ್ಟಿಲಿಳಿದು ಬರುವ ಶಬ್ದವಾಯಿತು..ಭಾಗವತರು ಅವಸರವಸರವಾಗಿ ತಿಂದು ಹೊರನಡೆದರು...
ಓ ದಿನೇಶ.. ಎಲ್ಲೋ ದಾದ ಬರಲಿಲ್ವಾ..? ಅಮ್ಮಮ್ಮ ಕೇಳುತ್ತಲೇ ಹಿತ್ತಲಿನಿಂದ ಅಂಗಳಕ್ಕೆ ಬಂದರು...ಮನೆಯ ರಚನೆಯೆು ಹಾಗಿತ್ತು...ಹಿತ್ತಲಿನಿಂದ ಮೆಟ್ಟಿಲು ಸ್ಪಷ್ಟವಾಗಿ ಕಾಣುತ್ತಿತ್ತು.. ಅದಲ್ಲದೇ ಹಿತ್ತಲಿನಿಂದಲೇ ನೇರವಾಗಿ ಅಂಗಳಕ್ಕೆ ಹಾದು ಬರಲು ಸಣ್ಣ ದಾರಿಯಿತ್ತು.. ಆಮೇಲೆ ಅರ್ಥವಾಗಿದ್ದು ಕೆಲಸದವರು ಮನೆ ಪ್ರವೇಶಿಸದಂತೆ ಹಿತ್ತಲ ಕಡೆಗೆ ಹೋಗಲು ನೇರವಾದ ಮಾರ್ಗ ಅದು..ಹಳ್ಳಿಗಳಲ್ಲಿ ತಾವು ಮೆಲು ಜಾತಿ ಎಂದು ತಿಳಿದ ಜನ ಅವರೇ ಅಂದುಕೊಂಡ ಕೀಳು ಜಾತಿಯವರಿಗೆ ದಾರಿ ತೋರಿಸುವ ವಿಧಾನ ಅದು...ಅದ್ಸರಿ ಈ ದಿನೇಶ ಯಾರು..?
ಪುರಿಯನ್ನು ಕೇಳಿದೆ... ಪಾಂಡು ಮಗ..
ಅಯ್ಯೋ ಈ ಪಾಂಡು ಯಾರಪ್ಪಾ...?
ಅದೇ ಕಣೋ...ಎಲೆಕ್ಟ್ರಿಶಿಯನ್ನು..ತಂತಿ ಬೇಲಿ ರಿಪೇರಿ...ಹಂದಿ..
ಅಬ್ಬಬ್ಬಾ ಈಗ ಅರ್ಥವಾಯ್ತು.. ಪಾಂಡು ಮಗ ದಿನೇಶ.. ನೋಡಲಿಕ್ಕೆ ಸ್ವಲ್ಪ ಕಪ್ಪು..ಧೋನಿ ತರ ಕೂದಲು ಬಿಟ್ಟಿದ್ದ..ಕಾಲೇಜಿಗೆ ಹೋಗೋ ತರ ಕಾಣ್ತಿದ್ದ... ಕಣ್ಣ ಪಕ್ಕದಲ್ಲಿದ್ದ ಸುಟ್ಟಿದ ಕಲೆ ಸ್ವಲ್ಪ ವಿಚಿತ್ರವಾಗಿ ಕಾಣುವಂತೆ ಮಾಡಿತ್ತು..ಅದಷ್ಟು ಬಿಟ್ಟರೆ ನೋಡಲು ಸುಂದರವಾಗೇ ಇದ್ದ..ಇರಲಿ ಅವನು ಹೇಗಿದ್ದರೆ ನನಗ್ಯಾಕೆ..ಇವನು ಯಾಕೆ ಬಂದ..ಪಾಂಡುಗೆ ಏನೋ ಆಗಿ ಮಗನನ್ನ ಕಳಿಸಿರಬೇಕು...ಇವನಿಗೂ ರಿಪೇರಿ ಕೆಲಸ ಬರುತ್ತೋ ಇಲ್ಲ ಸುಮ್ಮನೆ ವಿಷಯ ತಿಳಿಸೋಣ ಅಂತ ಬಂದ್ನೋ...ಇಲ್ಲ ರಿಪೇರಿ ಮಾಡಬಹುದು.. ಸುಮ್ಮನೆ ವಿಷಯವಾದ್ರೆ ಫೋನ್ನಲ್ಲೇ ಹೇಳ್ಬೋದಿತ್ತು...
ನನ್ನ ಊಹೆ ನಿಜವಾಗಿತ್ತು.. ದಿನೇಶ ಐ.ಟಿ.ಐ ಮಾಡ್ತಿದ್ದಾನೆ..ಇಂತ ರಿಪೇರಿ ವಿಷಯದಲ್ಲಿ ಎತ್ತಿದ ಕೈ.. ಪುರಿಯಂದ ಪರಿಚಯವಾಯಿತು..ಭಾಗವತರು ಒಂದು ಕತ್ತಿ ಹಿಡಿದು ದಿನೇಶನ ಜೊತೆ ತೋಟಕ್ಕೆ ನಡೆದರು.. ಇವನಪ್ಪನಿಗೆ ಬೀಡಿ ಸಹವಾಸ ಬಿಡು ಅಂತ ಹೇಳಿ ಹೇಳಿ ಸಾಕಾಯ್ತು..ನೋಡು ಹೀಗೆ ಆಗೋದು..ಇವತ್ತು ಶ್ವಾಸ ಕಟ್ಟಿದ ಹಾಗಾಯ್ತು ಅಂತಿದ್ದಿ...ನಾಳೆ ಏನಾದ್ರೂ ಹೆಚ್ಚು ಕಡಿಮೆ ಆದ್ರೆ... ಹಿತ್ತಲ ಕಡೆಗೆ ಪುನಃ ಹೊರಟಿದ್ದ ಅಮ್ಮಮ್ಮನ ಮುಂದಿನ ಮಾತುಗಳು ಅಸ್ಪಷ್ಟವಾಗಿದ್ದವು..ಹಳ್ಳಿಗರಲ್ಲಿ ಯಾರಿಗೆ ಏನಾದರೂ ಎಲ್ಲರಿಗೂ ಚಿಂತೆ...
ಅಪ್ಪಾ ನಾವೂ ಬರ್ತೀವಿ.. ಪುರಿ ಬೇರೆ ಯಾವುದೋ ಒಂದು ಚಪ್ಪಲಿ ತಂದ..ಅವನ ಹರಿದು ಹೋದ ಚಪ್ಪಲಿ ಅಂಗಳದ ತುದಿಯಲ್ಲಿ ಇರುವೆಗಳಿಗೆ ಆಹಾರವಾಗುತ್ತಿತ್ತು... ನಿನ್ನ ಶೂ ಎತ್ತಿ ಬೇರೆ ಎಲ್ಲಾದರೂ ಇಡೋ..ಇರುವೆಗಳು ನಿನ್ನ ಸಾಕ್ಸ್ನ ಪರಿಮಳಕ್ಕೆ ಮನಸೋತು ತಿಂದು ಹಾಕಿದರೆ ಮತ್ತೆ ನೀ ಬರಿ ಕಾಲಲ್ಲಿ ತಿರುಗಬೇಕು ನೋಡು.... ಅಯ್ಯೋ ಇದೊಂದು ಗ್ರಹಚಾರವಾಯ್ತುಲ್ಲ... ನಾ ಈ ಊರನ್ನೆಲ್ಲಾ ಶೂ ಹಾಕಿಕೊಂಡು ಸುತ್ತಬೇಕೆ..? ದೇವಸ್ಥಾನಕ್ಕೂ ಇದೇ ಶೂ..ತೋಟಕ್ಕೂ ಇದೇ ಶೂ..? ಪುರಿ..ಹೇಗಾದ್ರೂ ಒಂದ್ ಚಪ್ಪಲಿ ಅರೇಂಜ್ ಮಾಡೋ... ಇಲ್ಲೆಲ್ಲಾ ಶೂ ಹಾಕೊಂಡ್ ಓಡಾಡಲ್ಲ ನಾನು...
ಸರಿ ..ಅತಿಥಿ ದೇವೋ ಭವ.. ಅಂತ ಮತ್ತೊಂದ್ ಚಪ್ಪಲಿ ಜೊತೆ ತಂದ...ಅದನ್ ಹಾಕ್ಕೊಂಡು ಹೊರಟ್ವಿ ತೋಟದ ಕಡೆಗೆ..ಅದೇ ದಾರಿ.. ದೇವಸ್ಥಾನದ ಹತ್ತಿರವೇ ಇತ್ತು ತೋಟ..ಅಲ್ಲೇ ಹಂದಿ ಬಿದ್ದದ್ದು...ಈಗ ದೇವಸ್ಥಾನದ ಹತ್ತಿರ ಯಾರೂ ಇರಲಿಲ್ಲ... ಹಂದಿಯೂ ಸಹ... ಹಂದಿಯನ್ನ ಸಾಬ್ರು ತಗೊಂಡ್ ಹೋದ್ರಂತೆ..
ಪುರಿ ನನ್ನ ಮನವರಿತಂತೆ ಮೌನಕ್ಕೆ ಉತ್ತರಿಸಿದ..
ಅಲ್ವೋ ನಿಮ್ಮೂರಲ್ಲಿ ಜಾತಿ ಜಾತಿ ಅಂತ ಇಷ್ಟೆಲ್ಲಾ ಅಂತಾರಲ್ಲ... ಯಾರೂ ಇದರ ವಿರುದ್ಧ ಮಾತಾಡಲ್ವಾ..?
ಯಾರೋ ಮಾತಾಡ್ತಾರೆ... ಎಲ್ಲರಿಗೂ ಸಮಾಜ ಅಂದ್ರೆ ಭಯ ಇದ್ದೇ ಇರುತ್ತೆ... ಯಾರಾದ್ರೂ ಮಾತಾಡ್ದಾ ಅಂತಿಟ್ಕೋ..ಅವನು ಉಳಿದವರೆಲ್ಲರ ವಿರೋಧ ಕಟ್ಕೋಬೇಕಾಗತ್ತೆ.... ಮುಂದೇನೋ ಹೇಳುತ್ತಾನೆ ಅಂದ್ಕೊಂಡೆ... ಅಷ್ಟಕ್ಕೇ ನಿಲ್ಲಿಸಿಬಿಟ್ಟ... ಆ ಮೌನಕ್ಕೆ ಹೆಚ್ಚು ಅರ್ಥವಿದ್ದಂತೆ ನನಗೂ ಅನ್ನಿಸಲಿಲ್ಲ...
ತೋಟ ಅಂದ್ರೆ ನಾನು ಹೂ ಹಣ್ಣೀನ ಗಿಡ ಬೆಳೆಸುತ್ತಾರೆ ಅಂದ್ಕೊಂಡಿದ್ದೆ...ಅಲ್ಲ ಅಲ್ಲೂ ಅಡಿಕೆ ಗಿಡಗಳೇ..ಅಲ್ಲಲ್ಲಿ ತೆಂಗಿನ ಮರ.. ಒಂದೆರಡು ಬಾಳೆ ಗಿಡ..ಅಷ್ಟೇ..ಉಳಿದದ್ದೆಲ್ಲಾ ಕಳೆಗಳೇ..ಕಾಲಿರಿಸಲು ಜಾಗ ಹುಡುಕಬೇಕು..
ಇಲ್ಲೆಲ್ಲೋ ದಾರಿ ಇತ್ತಲ್ಲಾ..? ನನಗೆ ದಾರಿ ತೋರಿಸುವ ಗೈಡ್ ಪುರಿಯೆು ಈ ರೀತಿ ಪ್ರಶ್ನೆ ಮಾಡಬಾರದಿತ್ತು... ನಾವ್ ನಡೆದದ್ದೇ ದಾರಿ ಎಂಬಂತೆ ನಡೆಯುತ್ತಿದ್ದೆವು..ತೋಟದಲ್ಲಿ ನಡೆಯುವುದು ಕಾಡಿನಲ್ಲಿ ನಡೆದಂತಾಗುತ್ತಿತ್ತು..ಸುಮಾರು ಹತ್ತೆಕರೆ ಇರಬಹುದು..ತೋಟದ ಆ ಅಂಚಿಗೆ ಒಂದು ಪಂಪ್ ಹೌಸ್..ಭಾಗವತರೂ ದಿನೇಶನೂ ಅಲ್ಲೇ ಕುಳಿತಿದ್ದುದು ಕಾಣುತ್ತಿತ್ತು...ದಿನೇಶ ಯಾವುದೋ ವೈರನ್ನು ಹಲ್ಲಿನಿಂದ ಕಚ್ಚಿ ಎಳೆಯುತ್ತಿದ್ದ...ಭಾಗವತರು ಕಾಲಿಗೆ ಮುತ್ತಿಕೊಂಡಿದ್ದ ಸೊಳ್ಳೆಗಳನ್ನ ಸಾಯಿಸುವ ಕಾರ್ಯದಲ್ಲಿ ಮಗ್ನವಾಗಿದ್ದರು..
ಎಷ್ಟಾದರೂ ಇಂಜಿನಿಯರ್ ಅಲ್ಲವೇ..? ಏನಾಗಿದೆ.. ? ನಾನೇ ಆಫೀಸರ್ ತರಹ ಕೇಳಿದೆ... ಏನೂ ಇಲ್ಲಾ.. ಹಂದಿ ಬಿತ್ತಲ್ಲಾ... ಎರಡೂ ವೈರ್ ಶಾರ್ಟ್ಆಗಿ ಬ್ಯಾಟರಿ ಹತ್ತಿರ ಸುಟ್ಟು ಹೋಗಿದೆ..ಸ್ವಲ್ಪ ಕಟ್ ಮಾಡಿ ಮತ್ತೆ ಜಾಯಿಂಟ್ ಮಾಡಿದರೆ ಸರಿ ಆಗುತ್ತೆ ದಿನೇಶ ವಿವರಿಸಿದ..ನಾನೂ ನಮ್ಮ ಲ್ಯಾಬ್ನಲ್ಲಿ ಸುಟ್ಟು ಹೋದಂತೆ ಎನೋ ಆಗಿರಬೇಕು ಅಂದುಕೊಂಡೆ..
ಆ ದಿನೇಶನ ಬಗ್ಗೆ ಸ್ವಲ್ಪ ಹೆಚ್ಚು ಬರೆಯಬೇಕು ಅನಿಸುತ್ತಿದೆ...ಅದಕ್ಕೆ ಕಾರಣ ಇಲ್ಲವೇನೆಂದಲ್ಲ...ನಮ್ಮ ವಯಸ್ಸಿನ ಹುಡುಗ ಈ ರೀತಿ ದುಡಿದು ಓದುತ್ತಿದ್ದಾನೆ ಅಂದರೆ ನಮಗೆ ಕುತೂಹಲ ಮೂಡುವುದು ಸಹಜ...ಆ ಕುತೂಹಲವೇ ಮಾತಿಗೆ ತಿರುಗಿತು..
ದಿನೇಶ್...ಇವತ್ತು ನಿಮಗೆ ಕಾಲೇಜಿಲ್ವಾ..?
ಏನ್ ಸರ್ ಇವತ್ತು ಭಾನುವಾರವಲ್ವಾನೀವ್ ನನ್ನನ್ನು ನೀವು ತಾವು ಅಂತ ಕರೀಬೇಡಿ.. ಸರಿ ಇರಲ್ಲ...
ಸರಿ ನೀನೂ ನನ್ನನ್ನು ಸರ್ ಅಂತೆಲ್ಲಾ ಕರೀಬೇಡ
ಛೆ..ಕಾಲೇಜಿಲ್ಲ ಅಂದ್ರೆ ದಿನ,ತಿಥಿ,ವಾರ,ನಕ್ಷತ್ರ ಎಲ್ಲವೂ ಮರೆತು ಹೋಗುತ್ತದೆ..
ಇದನ್ನೆಲ್ಲಾ ಕಾಲೇಜಿನಲ್ಲೆ ಕಲಿತದ್ದಾ?
ಕಾಲೇಜಾ..? ಹೋಗ್ದೆ ನಾಲ್ಕೈದು ದಿನ ಆಯ್ತು..ಕಾಲೇಜಿನಲ್ಲಿ ಯಾರು ಇದನ್ನೆಲ್ಲಾ ಹೇಳ್ಕೊಡ್ತಾರೆ..? ಎಲ್ಲಾ ಅಪ್ಪ ಮಾಡುವುದನ್ನು ನೋಡಿ ನೋಡಿ ಕಲಿತದ್ದು...ಜೀವನ ಆಗಬೇಕಲ್ಲಾ..
ದಿನೇಶ ನಮಗಿಂತ ಎತ್ತರದಲ್ಲಿದ್ದ.. ಅಪ್ಪ ಹೇಳುವುದನ್ನೂ ಕೇಳದೆ ನಾವು ಮಾಡಿದ್ದೇ ಸರಿ ಎನ್ನುವ ನಮ್ಮ ನಡುವೆ ಅಪ್ಪನಿಂದ ಕಲಿತು ಅಪ್ಪನಿಗೆ ಆಸರೆಯಾಗಿರುವ ದಿನೇಶ ದೊಡ್ಡವನಂತೆ ಕಂಡ... ಜೀವನ ಬುದ್ಧಿಯನ್ನು ಸ್ವಲ್ಪ ಹೆಚ್ಚೇ ಬೆಳೆಸಿತ್ತು..
ಭಾಗವತರೇ ಇದು.. ಸರಿಯಾಯ್ತು...ನಾ ಹೊರಡ್ತೇನೆ.. ದಿನೇಶ ಹೊರಡಲು ಸಿದ್ಧನಾದ.
ಏನ್ ಸರಿಯಾಯ್ತೋ ಏನೋ...ಮತ್ತೆ ಹಂದಿ ಬಂದು ಎಲ್ಲಾ ಹಾಳು ಮಾಡದಿದ್ರೆ ಸಾಕು.. ನೀ ಮನೆ ಕಡೆ ಬಂದು ಅವಲಕ್ಕಿ ತಿಂದ್ ಹೋಗಬಹುದಿತ್ತು... ನುಸಿ ಹೊಡೆಯುತ್ತಿದ್ದ ಭಾಗವತರು ಎದ್ದು ನಿಂತರು..
ಇಲ್ಲಾ..ಅಪ್ಪನಿಗೆ ಔಷಧ ತರ್ಲಿಕ್ಕೆ ಹೋಗಬೇಕು...
ಸರಿ..ಪಾಂಡುಗೆ ಹೇಳು..ದುಡ್ಡು ಇನ್ನೊಂದಿನ ಕೊಡ್ತಾರಂತೆ..ಅಂತ...
ಆದ್ರೂ..ಇವತ್ತು ಕೊಟ್ಟಿದ್ರೆ .......
ಇಲ್ಲಾ ಅಂತ ಹೇಳಿದ್ನಲ್ಲಾ...ಮೊದ್ಲೇ ಅಡಿಕೆ ರೇಟಿಲ್ಲಾ...ಈ ಹಂದಿ ಬಂದು ಇಷ್ಟೆಲ್ಲಾ ರಾಮಾಯಣ ಮಾಡಿದೆ..ದುಡ್ಡೆಲ್ಲಾ ಕುಮ್ಟೆಗೆ ಹೋಗಿ ಬಂದ ಮೇಲೆ.. ಸ್ವಲ್ಪ ಮುನಿಸಿನಿಂದಲೇ ಹೇಳಿದರು ಭಾಗವತರು.
ದಿನೇಶ ಒಂದೂ ಮಾತನಾಡದೆ ಹೊರಟು ಹೋದ..ಅದು ಸಹಜ..ಕೆಲಸ ಮಾಡಿದ ಮೇಲೆ ರೇಗಾಡಿದರೆ ಎಂಥವರಿಗೂ ಬೇಸರವಾಗುತ್ತದೆ..ಅದೂ ನಮ್ಮಂಥ ಬಿಸಿರಕ್ತದವರಿಗೆ...
ಇಷ್ಟೊತ್ತಿಗೆ ಸೂರ್ಯ ಮೇಲೆ ಬಂದು ಆಕಾಶದ ನೀಲಿಯನ್ನು ಬೆಳ್ಳಗೆ ಮಾಡಿದ್ದ.. ತೋಟದ ಹಸಿರಿನ ನಡುವೆ ಅಲ್ಲಲ್ಲಿ ಬಿದ್ದ ಬಿಸಿಲು ಕಳೆಗಳ ಮೇಲೆ ಚಿತ್ತಾರ ಬಿಡಿಸಿತ್ತು.. ಭಾಗವತರು ಬಂದ ದಾರಿಯಲ್ಲೇ ಮರಳತೊಡಗಿದರು.. ಪುರುಷೋತ್ತಮಾ.. ಬನ್ನಿ ಮನೆಗೆ ಹೋಗುವ..ಹೊತ್ತಾತು..ಸ್ನಾನ ಮಾಡಿ ದೇವರಪೂಜೆ ಬೇರೆ ಮಾಡಬೇಕು... ಪೂಜೆಯನ್ನು ಬೇರೆ ಯಾರದ್ದೋ ಸಲುವಾಗಿ ಮಾಡುವಂತ ಧ್ವನಿಯಲ್ಲಿ ಭಾಗವತರು ಕೂಗಿದರು.
ನಾನೂ ಪುರಿಯೂ ನಿಧಾನವಾಗಿ ಹೆಜ್ಜೆ ಹಾಕತೊಡಗಿದೆವು..ದಿನೇಶನ ಬಗ್ಗೆ ಕೇಳಬೇಕೆನಿಸಿದರೂ ಕೇಳಲಿಲ್ಲ..
0 comments:
Post a Comment